ಗ್ರಾಹಕರ ಸಂವಾದ ಸಭೆ ಸುರಿಮಳೆ ಅಗಿರವ ಪ್ರಶ್ನೆ ಗಳು.!! ಬಳ್ಳಾರಿ(9)ನಗರದ ಪಾಲಿಕೆ ಕಚೇರಿ ಮುಂದೆ ಇರುವ ಜೆಸ್ಕಾಂ ಇಲಾಖೆಯಲ್ಲಿ ಶುಕ್ರವಾರ ಸಾರ್ವಜನಿಕರ ಕುಂದುಕೊರತೆಗಳ ಸಭೆಯನ್ನು ಆಯೋಜನೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ನಗರದ ಎ ಡಬ್ಲ್ಯೂ ಅಶೋಕ್ ರೆಡ್ಡಿ ಮತ್ತು ಇ ಟಿ ಲಕ್ಷ್ಮಿ ಮುಂತಾದ ಅಧಿಕಾರಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಗ್ರಾಹಕರು ಸಾಕಷ್ಟು ಮಂದಿ ಸಂವಾದದ ಸಭೆಯಲ್ಲಿ ಪಾಲ್ಗೊಂಡಿದ್ದರು.
ಜೆಸ್ಕಾಂ ಇಲಾಖೆಯಲ್ಲಿ ಗ್ರಾಹಕರಿಗೆ ದುಬಾರಿ ವಿದ್ಯುತ್ ಬಿಲ್ಲುಗಳು ಬರುತ್ತದೆ ಎಂದು ಅಧಿಕಾರಗಳ ಗಮನಕ್ಕೆ ಅಧಿಕ ತರಲಾಯಿತು.
ಮತ್ತು ಗುತ್ತಿಗೆದಾರರಿಗೆ ನೇರವಾಗಿ ಇಲಾಖೆಯಿಂದ ಕಾಮಗಾರಿಗಳು ಮಾಡಲು ಆಗುತ್ತಿಲ್ಲವೆಂದು ಜೆಸ್ಕಂ ಇಲಾಖೆಯ ನೌಕರರೇ (ಲೈನ್ ಮಾನಗಳು) ಗುತ್ತೇದಾರರ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಕೆಲವು ಗುತ್ತಿಗೆದಾರರು ಅಧಿಕಾರಿಗಳು ಗಮನಕ್ಕೆ ತರಲಾಯಿತು.
ಮುತ್ತು ಕೆಲ ಪ್ರದೇಶಗಳಲ್ಲಿ ವಿದ್ಯುತ್ ತಂತಿಗಳು ಜೋತಾಡ್ತಾ ಇದ್ದಾವೆ ಎಂದು ಕಂಬಗಳಿಲ್ಲದೆ ತುಂಬಾ ದೂರದಿಂದ ಕಟ್ಟಿಗೆ ಕಂಬಗಳು ಮೂಲಕ ವಿದ್ಯುತ್ ಸಂಪರ್ಕವನ್ನು ತೆಗೆದುಕೊಳ್ಳುವ ಪರಿಸ್ಥಿತಿ ಇದೆ ಎಂದು ಅಧಿಕಾರಿಗಳ ಗಮನಕ್ಕೆ ತರಲಾಯಿತು.
ಇನ್ನು ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಪದೇ ಪದೇ ಕಡಿತು ಗೊಳ್ಳುತ್ತದೆ ಎಂದು ಸಭೆಗೆ ತಿಳಿಸಿದರೆ.
ಕೆಲ ಪ್ರದೇಶಗಳಲ್ಲಿ ಸಕ್ರಿಯವಾಗಿ ವಿದ್ಯುತ್ ಬಿಲ್ಲುಗಳನ್ನು ನೀಡದೆ ವಿಳಂಬ ಮಾಡುತ್ತಿದ್ದಾರೆ ಎಂದು ಅದರಿಂದ ಗ್ರಹಕರಿಗೆ ಹಣ ತುಂಬಾ ಹೆಚ್ಚಿಗೆ ಆಗುತ್ತದೆ ಎಂದು ತಿಳಿಸಿದರು.
ಕೆಲ ಪ್ರದೇಶಗಳಲ್ಲಿ ವಿದ್ಯುತ್ ಎಂಪ್ಲಾಯಗಳು ವಿನಾಕಾರಣ ಇಲಾಖೆಗೆ ನಷ್ಟ ಉಂಟು ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಇಲಾಖೆಯಲ್ಲಿ ಸರಿಯಾಗಿ ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗದೆ ಇರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಕೆಲಸಗಳು ವಿಳಂಬವಾಗುತ್ತದೆ ಎಂದು ತಿಳಿಸಿದರು.
ನಗರದಲ್ಲಿ ಹಲವಾರು ತಿಂಗಳುಗಳಿಂದ ವಿದ್ಯುತ್ ಮೀಟರ್ ಗಳು ಇಲ್ಲದೆ ಗೃಹಕರಿಗೆ ವಿದ್ಯುತ್ ಸಂಪರ್ಕವನ್ನು ನೀಡಲು ಕಷ್ಟವಾಗುತ್ತದೆ ಎಂದು ಅಧಿಕಾರಿಗಳ ಗಮನಕ್ಕೆ ತಂದರು.
ಯಾರು ಈ ಕುರಿತು ಜವಾಬ್ದಾರಿ ತೆಗೆದುಕೊಳ್ಳುತ್ತಿಲ್ಲವೆಂದು ಗುತ್ತಿಗೆದಾರರು ಅಧಿಕಾರಿಗಳಿಗೆ ದೂರು ನೀಡಿದರು.
ಇದೇ ಸಂದರ್ಭದಲ್ಲಿ ಜೆಸ್ಕಾಂ ಇಲಾಖೆಯ ಇ,ಇ ಆಗಿರುವ ಹುಸೇನ್ ಸಾಬ್ ಅವರು ಬಿನಾಮಿ ಗೊತ್ತಗೆದಾರರ ಮೂಲಕ ಕಾಮಾರಿಗಳನ್ನು ಮಾಡುತ್ತಾ ಗುತ್ತಿಗೆದಾರರಿಗೆ ವಂಚೇನೆ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಇನ್ನೂ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ವಿಚಾರದಲ್ಲಿ ಫೈಲ್ ಗಳು ಮುಂದಕ್ಕೆ ಹೋಗುತ್ತಿಲ್ಲವೆಂದು ವಿಳಂಬ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಇಲಾಖೆಯಲ್ಲಿ ಕಾಮಗಾರಿಗಳು ಎಲ್ಲಾ ಗುತ್ತಿಗೆದಾರರಿಗೆ ಸಕ್ರಿಯವಾಗಿ ನೀಡುವಂತೆ ಮನವಿ ಮಾಡಿದರು.