*ಡಿಕೆಸಿ ಆಪ್ತ ನ ಮೊನೊ ಭಾವ ವಿಜಯ,ದಶಮಿ ಸಂದರ್ಭದಲ್ಲಿ ಬಹಿರಂಗ!!* ಬಳ್ಳಾರಿ ರಾಜಕೀಯ,ಅಂದರೆ ಅದು ದೇಶ ಮಟ್ಟದಲ್ಲಿ ಸದ್ದು ಮಾಡುತ್ತದೆ.
ಈಗಾಗಲೇ ಚುನಾವಣೆ ಗೆ ಮುನ್ನವೇ ಕಾಂಗ್ರೆಸ್ ಪಕ್ಷದಲ್ಲಿ ಟವಲ್ ಹಾಕುವ,ಟೆಂಪರ್ ವರಿ ನಾಯಕರ ಬ್ಯಾನರ್ ಗಳು ಪೋಟೋ ಗಳು ರಸ್ತೆ ಗಳ ಗೋಡೆಗಳ ಮೇಲೆ ಕಾಣುತ್ತವೆ.
ಇದಕ್ಕೆ ಹಲವಾರು ಲೆಕ್ಕಾಚಾರ ಗಳು ಇರುತ್ತವೆ.
ಕೆಲವರು ಇಂತಹ ನಾಟಕ ಮಾಡಿದರೆ, ಪಕ್ಷದಲ್ಲಿ ಗೌರವ,XYZ ಅನುಕೂಲ ಆಗುತ್ತದೆ ಅನ್ನುವ ಕಥೆಗಳು!!.
ಆದರೆ ಪಕ್ಷ ಯಾಲ್ಲವು ಗಮನಿಸುತ್ತದೆ ಕೆಲ ವರ್ಷಗಳ ದಿಂದ ಯಾರು ಯಾರು ಯಾವ ಡ್ರಾಮಾ ಗಳು ಮಾಡುತ್ತಾ ಇದ್ದಾರೆ ಅನ್ನುವ, ಮಾಹಿತಿ ಹೈ ಕಮಾಂಡ್ ಗೆ ಸೇರಿದೆ.
ಇದರಲ್ಲಿ ಇಷ್ಟು ದಿನಗಳು ಮೌನವಾಗಿ ಇದ್ದ ಡಿಕೆಸಿ ಆಪ್ತ, ಕಾಂಗ್ರೆಸ್ ಪಕ್ಷದ ನಿಷ್ಠಾವಂತ, ರಾಜಕಾರಣಿ, ಮಾಜಿ ಬುಡಾ ಅಧ್ಯಕ್ಷರು,ಇತರ ಪಕ್ಷದ ದಬ್ಬಾಳಿಕೆಯ ಆಡಳಿತ ದಲ್ಲಿ, ಕಾಂಗ್ರೆಸ್ ಪಕ್ಷದ ಪರವಾಗಿ ನಿಂತು, ಶಕ್ತಿ ತುಂಬಿ ಕಾರ್ಯಕರ್ತರ ಗೆ ಸೇತುವೆ ಅಗಿ ಪಕ್ಷವನ್ನು ನಡೆಸಿದ್ದ ಜೆ,ಎಸ್,ಆಂಜನೇಯುಲು,ಈಬಾರಿ,ಕಾಂಗ್ರೆಸ್ ಪಕ್ಷದ ವಿಧಾನ ಸಭಾ (MLA)ನಗರದ ಪ್ರಬಲ ಆಕಾಂಕ್ಷಿ ಏಂದು ಬ್ಯಾನರ್, ಫ್ಲಕ್ಸ್ ಗಳು, ಮೂಲಕ ವಿಜಯ ದಶಮಿ ಸಂದರ್ಭದಲ್ಲಿ,ಸಂದೇಶ ರವಾನೆ ಮಾಡಿದ್ದಾರೆ.
ಇದು ಒಂದು ರೀತಿಯಲ್ಲಿ, ಸುನಾಮಿ ಸಂದೇಶ,ಈಗಾಗಲೇ ಆಂಜನೇಯುಲು ಯಾಲ್ಲವು ಸಿದ್ದತೆ ಗಳು ಮಾಡಿಕೊಳ್ಳುವ ವ್ಯವಸ್ಥೆ ಯಲ್ಲಿ ಇದ್ದಾರೆ.
ಕಾಂಗ್ರೆಸ್ ಪಕ್ಷ ಈಹಿಂದೆ ರೀತಿಯಲ್ಲಿ ಕಣ್ಣು ಮುಚ್ಚಿಕೊಂಡು ಟಿಕೆಟ್ ಕೊಡುವ ದಿನಗಳು ಇಲ್ಲ.
ಪಕ್ಷದ ಪರವಾಗಿ ಎಷ್ಟರ ಮಟ್ಟಿಗೆ ಕೆಲಸವನ್ನು ಮಾಡಿದ್ದಾರೆ ಅನ್ನುವ ಹಿನ್ನೆಲೆಯಲ್ಲಿ, ಟಿಕೆಟ್ ಇರುತ್ತದೆ.
ಕೋಟಿ ಕೋಟಿ ಹಣ,ಹಳೆಯ ಹೆಸರುಗಳು, ಮಾಜೀ ಗಳು ಗೆ ಮನ್ನಣೆಯನ್ನು ಕೊಡುವ ದಿನಗಳು ಅಲ್ಲವೇ ಅಲ್ಲ.
ಒಂದು ಕ್ಷೇತ್ರ ಬರುತ್ತೋ,ಹೊಗುತ್ತೊ,ನಿಷ್ಠಾವಂತ ರಗೆ, ಕೊಡುವುದು ಅವರ ನಿಲವು ಇರುತ್ತದೆ.
ಇಷ್ಟು ದಿನಗಳು ಮೌನವಾಗಿ ಇರುವ ಆಂಜನೇಯುಲು, ರಾಹುಲ್ ಯಾತ್ರೆ ಸಮಯದಲ್ಲಿ, ಸ್ಪರ್ಧೆಯಲ್ಲಿ ಇದ್ದಿನಿ ಅನ್ನುವ ಸಂದೇಶ,ಆಲ್ಲೋಲ,ಕಲ್ಲೋಲ ಸೃಷ್ಟಿ ಮಾಡಿದೆ.ರಾಜಕೀಯ ವಿದ್ಯಮಾನಗಳು ಏನಾದರೂ ಆಗಬಹುದು.!! (ಕೆ.ಬಜಾರಪ್ಪ ವರದಿಗಾರರು)