ಲೋಕೋಪಯೋಗಿ ಇಲಾಖೆಯ ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಡಿ.ವೆಂಕಟರಮಣ ಎತ್ತಂಗಡಿ
ಬಳ್ಳಾರಿ,ಜ:30, ಲೋಕೋಪಯೋಗಿ ಇಲಾಖೆಯ ಬಳ್ಳಾರಿ ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಾಗಿದ್ದ ಡಿ.ವೆಂಕಟರಮಣ ಎತ್ತಂಗಡಿಯಾಗಿದ್ದಾರೆ. ಈ ಹಿಂದೆಯೇ ಇವರಿಗೆ ವರ್ಗಾವಣೆ ಮಾಡಲಾಗಿತ್ತು. ಆದರೆ ವೆಂಕಟರಮಣ ಎರಡು ವರ್ಷ ಪೂರ್ತಿಯಾಗಿಲ್ಲ ಎಂದು ಕೆಎಟಿ(ಕರ್ನಾಟಕ ಆಡಳಿತ ನ್ಯಾಯ ಮಂಡಳಿತ)ಯಿಂದ ತಡೆಯಾಜ್ಞ ತಂದು ಎರಡು ವರ್ಷ ಪೂರ್ಣಗೊಳಿಸಿ ಈಗ ವರ್ಗಾವಣೆಯಾಗಿದ್ದಾರೆ. ಈ ಸ್ಥಳಕ್ಕೆ ಈ ಹಿಂದೆ 2016 ರಲ್ಲಿದ್ದ ಕಾರ್ಯನಿರ್ವಹಿಸಿದ ವಿ.ನಾಗದೇವ ಈಗ ಪುನಃ ಕಾರ್ಯನಿರ್ವಾಹಕ ಅಭಿಯಂತರರಾಗಿ ಇಂದು ಅಧಿಕಾರ ವಹಿಸಿಕೊಂಡಿದ್ದಾರೆ.