This is the title of the web page
This is the title of the web page

Please assign a menu to the primary menu location under menu

State

ಕೆ.ಆರ್.ಪಿ.ಪಿ.ನಾಮ ಪತ್ರ ಸಲ್ಲಿಕೆಗೆ ಹರಿದು ಬಂದ ಜನಸಾಗರ

ಕೆ.ಆರ್.ಪಿ.ಪಿ.ನಾಮ ಪತ್ರ ಸಲ್ಲಿಕೆಗೆ ಹರಿದು ಬಂದ ಜನಸಾಗರ

*ಕೆ.ಆರ್.ಪಿ.ಪಿ.ನಾಮ ಪತ್ರ ಸಲ್ಲಿಕೆಗೆ ಹರಿದು ಬಂದ ಜನಸಾಗರ*
*ಬೆಂಬಲಿಗರ ಸುನಾಮಿ ಅಲೆಗೆ ಬಿಜೆಪಿ ಪಾಳಯದಲ್ಲಿ ನಡುಕ.*

ಬಳ್ಳಾರಿ (17) ರಾಜಕೀಯ ಚರಿತ್ರೆಯಲ್ಲೇ, ನಾಮ ಪತ್ರ ಸಲ್ಲಿಕೆಗೆ ಹರಿದುಬಂದ ಜನಸಾಗರ ಇದೇ ಮೊದಲು,
ಕೆಆರ್ ಪಿಪಿ ಪಕ್ಷದ ನಾಮಪತ್ರ ಸಲ್ಲಿಕೆ ವೇಳೆ ಸೇರಿದ್ದು.

ಬಳ್ಳಾರಿ ರಾಜಕೀಯ ಹೊಸ ದಾರಿಯತ್ತ ಸಾಗುತ್ತಿದೆ ಎನ್ನುವುದಕ್ಕೆ ನಿದರ್ಶನದಂತಿತ್ತು.

ಬಳ್ಳಾರಿ ನಗರ ಕ್ಷೇತ್ರದ ಕದನದಲ್ಲಿ ಗಾಲಿ ಜನಾರ್ದನ ರೆಡ್ಡಿ ಸಂಸ್ಥಾಪಿಸಿದ, ಕೆ.ಆರ್.ಪಿ.ಪಿ ಪಕ್ಷದಿಂದ. ಜನಾರ್ದನ ರೆಡ್ಡಿ ಪತ್ನಿ ಗಾಲಿ ಲಕ್ಷ್ಮಿ ಅರುಣಾ ಸೋಮವಾರ ನಾಮಪತ್ರ ಸಲ್ಲಿಕೆ ಮಾಡಿದರು.

ಗಾಲಿ ಜನಾರ್ದನ ರೆಡ್ಡಿಯವರ ಕುಟೀರ ದಿಂದ,ಬೆಳಿಗ್ಗೆ9ಗಂಟೆಗೆ ಪ್ರಾರಂಭವಾದ ಮೆರವಣಿಗೆ.
ಕಿಲೋ ಮೀಟರ್ ಗಟ್ಟಲೆ ಜನ ಸಾಗರ ತುಂಬಿ ತುಳಿಕಿತ್ತು.

ರಸ್ತೆಯುದ್ದಕ್ಕು ಜನಸಾಗರ,25,ಸಾವಿರಕ್ಕು ಮೇಲ್ಪಟ್ಟು ಜನರು ಸೇರಿದ್ದು, ಡೊಳ್ಳು ತಾಸಿ,ಗಳ ಮೂಲಕ ಪಾಲಿಕೆ ಕಛೇರಿ ಸೇರಿದ್ದು, ಸಂಭ್ರಮ ಸಡಗರ ದಿಂದ ಬಹಿರಂಗ ರೋಡ್ಸ್ ಶೋ ಜನಮನ ಸೆಳೆಯಿತು.
ಅಪಾರ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು,ಅಭಿಮಾನಿಗಳು,ಬಂದುಗಳು ಜನ ಸಾಗರವೇ ಹರಿದು ಬಂದಿತ್ತು.

ಗಾಲಿ ಜನಾರ್ದನ ರೆಡ್ಡಿಯ ಪರ ನಗರದಲ್ಲಿ ಎಷ್ಟುರ ಮಟ್ಟಿಗೆ, ಜನಶಕ್ತಿ ಇದೆ ಎನ್ನುವುದನ್ನ ಸಾಭೀತು ಪಡಿಸಿದಂತಾಯ್ತು.

ಇನ್ನು, ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ,
ಮಗಳು ಬ್ರಹ್ಮಿಣಿ, ಅಳಿಯ. ಜನಾರ್ಧನರೆಡ್ಡಿ ಮಾವನವರಾದ ಪರಮೇಶ್ವರ ರೆಡ್ಡಿ, ಶ್ರೀ ನಿವಾಸ ರೆಡ್ಡಿ(OMC) ಮತ್ತು ಅವರ ಸಮುದಾಯದ ಮುಖಂಡರು ಸೇರಿದಂತೆ. ರೆಡ್ಡಿ ಕಷ್ಟದ ಸಂದರ್ಭದಲ್ಲಿ
ಸಹಾಯಕ್ಕೆ ನಿಂತ ಆಪ್ತ ಬಳಗ ಮತ್ತು ನೂತನ ಪಕ್ಷದ ಅಪಾರ ಕಾರ್ಯಕರ್ತರ ಬಳಗ ಸಾಥ್ ನೀಡಿದ್ದರು.

ಬಿರು ಬಿಸಿಲಿಗೆ ಕಾದ ಅಂಚಿನಂತಾದ ರಸ್ತೆಯಲ್ಲಿ ದಾರಿಯುದ್ದಕ್ಕು, ಸಾಗಿಬಂದ ಜನಸಾಗರ.
ಬಿಸಿಲನ್ನು ಲೆಕ್ಕಿಸದೆ, ವಾದ್ಯಗಳಿಗೆ ಸ್ಟೆಪ್ ಹಾಕಿ ಸಂಭ್ರಮಿಸಿದರು.

ಇಂತಹ ಸನ್ನಿವೇಶಕ್ಕೆ, ಜನಾರ್ಧನರೆಡ್ಡಿ ಸಾಕ್ಷಿಯಾಗಿದ್ದರೆ ಇನ್ನು ಚೆನ್ನಾಗಿರುತ್ತಿತ್ತು ಎನ್ನುವುದು ಸಾರ್ವಜನಿಕ ವಲಯದ ಅಭಿಪ್ರಾಯ ಕೇಳಿಬಂತು.

ಬೆಂಬಲಿಗರ ದಣಿವಾರಿಸಲು, ಕಾರ್ಯಕರ್ತರು ಸಾರ್ವಜನಿಕರಿಗೆ.ನೀರು ಮತ್ತು ಮಜ್ಜಿಗೆ ವಿತರಿಸಿದರು.

ಇನ್ನು, ಸೋಮಶೇಖರ್ ರೆಡ್ಡಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು, ಈಬಾರಿ ಸಹೋದರನಿಗೆ ಬಿಟ್ಟು ಕೊಡಬೇಕಾಗಿತ್ತು.

ಅಥವ ಗಾಲಿ ಅರುಣಾ ಗೆಲವಿಗೆ ಸಹಕಾರ ಮಾಡಬಹುದಾಗಿತ್ತು, ಎನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿಬಂತು.ಗಾಲಿ ಸ್ನೇಹಿತರು ರಾಮುಲು ಮನೆಯ ಮುಂದೆ ಸಂಭ್ರಮ ನೋಡಬೇಕು ಆಗಿತ್ತು. ಒಂಟಿಯಾಗಿ ಮಹಿಳೆ ಹೋರಾಟ ನೋಡಿದರೆ ಮನಸ್ಸು ನಲ್ಲಿ ನೊವು ಹುಟ್ಟುವುದು ಖಚಿತ.

ಇನ್ನೂ ಸಮಯವಿದೆ, ಸೋಮಶೇಖರ್ ರೆಡ್ಡಿ ನಡೆ ಏನು ಅನ್ನವದು ಕಾದು ನೋಡಬೇಕು.
(ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ.)

 


News 9 Today

Leave a Reply