This is the title of the web page
This is the title of the web page

Please assign a menu to the primary menu location under menu

State

ಅದ್ದೂರಿ ಯಾಗಿ ಮಾಜಿ ಸಚಿವ ದಿವಾಕರ ಬಾಬು ಅವರು ಜನ್ಮದಿನ ಆಚರಣೆ

ಅದ್ದೂರಿ ಯಾಗಿ ಮಾಜಿ ಸಚಿವ ದಿವಾಕರ ಬಾಬು ಅವರು ಜನ್ಮದಿನ ಆಚರಣೆ

*ಅದ್ದೂರಿ ಯಾಗಿ ಮಾಜಿ ಸಚಿವ ದಿವಾಕರ ಬಾಬು ಅವರು ಜನ್ಮದಿನ ಆಚರಣೆ*
* ಅಭಿಮಾನಿಗಳಿಂದ ಫುಟ್‌ಬಾಲ್ ಪಂದ್ಯಾವಳಿ ಆಯೋಜನೆ
* ಅನ್ನಸಂತರ್ಪಣೆ, ದೇವರಲ್ಲಿ ಪೂಜೆ, ಪ್ರಾರ್ಥನೆ
ಬಳ್ಳಾರಿ: ಮಾಜಿ ಸಚಿವ ಎಂ.ದಿವಾಕರ ಬಾಬು ಅವರ ೬೫ನೇ ಜನ್ಮದಿನವನ್ನು ಅದ್ಧೂರಿಯಾಗಿ ಸೋಮವಾರ ಆಚರಿಸಲಾಯಿತು.
ನಗರದ ಎಲ್ಲೆಡೆ ಫ್ಲೆಕ್ಸ್, ಬ್ಯಾನರ್ ಅಳವಡಿಸಿ ಪರಿಸರಕ್ಕೆ ಹಾನಿಯುಂಟು ಮಾಡದೆ ಪ್ಲಾಸ್ಟಿಕ್ ರಹಿತ ಪರಿಸರ ಸ್ನೇಹಿಯಾಗಿ ನಗರದ ಬಿಡಿಎಎ ಮೈದಾನದಲ್ಲಿ ಫುಟ್‌ಬಾಲ್ ಪಂದ್ಯಾವಳಿ ಆಯೋಜಿಸುವ ಮೂಲಕ, ಶಾಲೆಗಳಲ್ಲಿ ಮಕ್ಕಳಿಂದ ಕೇಕ್ ಕತ್ತರಿಸಿ ಸಿಹಿ ವಿತರಿಸುವ ಮೂಲಕ, ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ದಿವಾಕರ ಬಾಬು ಅಭಿಮಾನಿ ಬಳಗ, ಯೂತ್ ಕಾಂಗ್ರೆಸ್ ವತಿಯಿಂದ ವಿಶಿಷ್ಟವಾಗಿ ಜನ್ಮದಿನವನ್ನು ಆಚರಿಸಿದರು.
ಫುಟ್‌ಬಾಲ್ ಪಂದ್ಯಾವಳಿಯಲ್ಲಿ ೧೨ ತಂಡಗಳು ಭಾಗವಹಿಸಿದ್ದು, ಭಾನುವಾರ ಲೀಗ್ ಪಂದ್ಯಗಳು ಮುಗಿದಿದ್ದು, ಸೋಮವಾರ ಸಂಜೆ ಫೈನಲ್ ಪಂದ್ಯ ನಡೆಯಲಿದೆ. ಅಲ್ಲದೆ, ನಗರದ ಗಂಗಪ್ಪ ಜಿನ್ ಆವರಣದಲ್ಲಿ ಸೋಮವಾರ ಬೆಳಗ್ಗೆ ಶಾಲಾ ಮಕ್ಕಳಿಂದ ಕೇಕ್ ಕತ್ತರಿಸಿ ಸಿಹಿ ವಿತರಿಸಲಾಯಿತು. ಜತೆಗೆ ೩೫೦೦ಕ್ಕೂ ಹೆಚ್ಚು ಜನರಿಗೆ ಅನ್ನದಾಸೋಹ ಮಾಡಲಾಯಿತು.
ಬಳಿಕ ನಗರದ ವಿಮ್ಸ್ ಆವರಣದಲ್ಲಿನ ರೋಗಿಗಳ ಸಂಬAಧಿಕರಿಗೆ, ಬಾಲಮಂದಿರ, ವೃದ್ಧಾಶ್ರಮಗಳಿಗೆ ತೆರಳಿದ ಅಭಿಮಾನಿಗಳು, ಅಲ್ಲಿಯೂ ಸಿಹಿ ವಿತರಿಸಿ, ಅನ್ನದಾಸೋಹ ಮಾಡಲಾಯಿತು. ಸಂಜೆ ನಗರದ ಎಸ್‌ಪಿ ಸರ್ಕಲ್‌ನಲ್ಲಿ ಪಾಲಿಕೆ ಮೇಯರ್ ರಾಜೇಶ್ವರಿ ಸುಬ್ಬರಾಯುಡು, ಉಪಮೇಯರ್, ಸದಸ್ಯರು, ಕಾಂಗ್ರೆಸ್ ಮುಖಂಡರು, ಸ್ಥಳೀಯರ ನೇತೃತ್ವದಲ್ಲಿ ಕೇಕ್ ಕತ್ತರಿಸಿ ಜನ್ಮದಿನ ಆಚರಿಸಿದರು. ನಗರದ ಕನಕದುರ್ಗಮ್ಮ ದೇವಸ್ಥಾನ ಸೇರಿ ವಿವಿಧ ದೇವಸ್ಥಾನಗಳಲ್ಲಿ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿ, ೬೫ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಮಾಜಿ ಸಚಿವ ಎಂ.ದಿವಾಕರ ಬಾಬು ಅವರಿಗೆ ಆಯುಷ್ಯ, ಆರೋಗ್ಯ, ಐಶ್ವರ್ಯ ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.
ಕಾರ್ಯಕ್ರಮದಲ್ಲಿ ಯೂತ್ ಕಾಂಗ್ರೆಸ್ ಪದಾಧಿಕಾರಿಗಳು, ಕಾಂಗ್ರೆಸ್ ಮುಖಂಡ ಲಕ್ಷಿö್ಮನಾರಾಯಣ (ಬುಜ್ಜಿ) ಪಾಲಿಕೆ ಮಾಜಿ ಸದಸ್ಯ ಎಂ.ರಾಘವೇAದ್ರ, ಎಂ.ಕೃಷ್ಣ ಕುಮಾರ್, ಎಂ.ದುರ್ಗಾ ಪ್ರಸಾದ್, ದಾರದಮಿಲ್ ಶೇಖರ್‌ಬಾಬು, ಡಿ.ಸೂರಿ, ರಾಮಾಂಜಿನಿ ಸೇರಿದಂತೆ ಕಾರ್ಯಕರ್ತರು, ಅಭಿಮಾನಿ ಬಳಗದರು ಇದ್ದರು.

೭ ಬಿಎಲ್‌ವೈ ೨
ಬಳ್ಳಾರಿಯ ಬಿಡಿಎಎ ಮೈದಾನದಲ್ಲಿ ಮಾಜಿ ಸಚಿವ ಎಂ.ದಿವಾಕರ ಬಾಬು ಅವರ ೬೫ನೇ ಜನ್ಮದಿನದ ನಿಮಿತ್ತ ಫುಟ್‌ಬಾಲ್ ಪಂದ್ಯಾವಳಿಯನ್ನು ಆಯೋಜಿಸಿರುವುದು.

ಅಪಾರ ಮಟ್ಟದಲ್ಲಿ ಅಭಿಮಾನಿಗಳು ನಗರದಲ್ಲಿ ಟೈಗರ್ ಜನ್ಮ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.

ಇಷ್ಟು ವರೆಗೆ ರಾಜಕೀಯವಾಗಿ ಕೆಲ ವಿಚಾರಗಳ ಯಿಂದ ದೂರ ಅಗಿರವ ದಿವಾಕರ ಬಾಬು ಮತ್ತೆ ರಣರಂಗದಲ್ಲಿ ಪ್ರವೇಶ ಮಾಡಿದ್ದಾರೆ.

ಜನರಲ್ಲಿ ಸಂತೋಷದ ವಾತಾವರಣ ಸೃಷ್ಟಿ ಅಗಿದೆ.

ಪ್ರಸ್ತುತ ವಿದ್ಯಮಾನಗಳ ಅನುಗುಣವಾಗಿ ರಾಜಕೀಯ ಮಾಡುವ ಪ್ಲಾನ್ ಹಾಕಿದ್ದಾರೆ.

ಆರ್ಥಿಕ ವಾಗಿ ಇತಿಹಾಸ ದಿಂದ ಶ್ರೀ ಮಂತರು,ವ್ಯಾಪಾರ ರಾಜಕೀಯ ಯಾಲ್ಲವು ಅವರ ಮನೆ ಬಾಗಿಲುಗಳು ಇದ್ದಂತೆ.

ಬಳ್ಳಾರಿ ಯಲ್ಲಿ ಆರ್ಥಿಕ ವಾಗಿ ಸಮಾಜಿಕ ವಾಗಿ ಕಮ್ಮ ಜನಾಂಗ ಗಟ್ಟಿ ಮುಟ್ಟು ಜನರು, ಜಿದ್ದಾಜಿದ್ದಿ ರಾಜಕೀಯ ಅಗಲಿ ಮತ್ತೆ ಬೇರೆ ವಿಚಾರ ಅಗಲಿ ಮಾಡುವ ಸಮಯ ಬಂದರೆ, ಹಾಕಿದ ಹೆಜ್ಜೆಯನ್ನು ಹಿಂದಕ್ಕೆ ಕೆತ್ತುವ ವಂಶಗಳು ಅಲ್ಲವೇ ಅಲ್ಲ,ಅದು ದಿವಾಕರ ಬಾಬು, ಮತ್ತು ಮುಂಡ್ಲೂರು ರಾಮಪ್ಪ,ಕುಟುಂಬದವರ ನಡೆಗಳು.

ಅದಕ್ಕೆ ಮತ್ತಷ್ಟು ಬಲ ಅವರ ಅಭಿಮಾನಿಗಳು.

ಅವರ ಸಮಾಜದಲ್ಲಿ ಇನ್ನೂ ಕೆಲವರು ಇದ್ದಾರೆ ವ್ಯಾಪಾರ ಮಾಡಿಕೊಂಡು ಜೀವನ ಮಾಡುವ ವ್ಯಾಪಾರಿ ಗಳು.

ಲಾಭವನ್ನು ಗುರಿ ಇಟ್ಟುಕೊಂಡು ಜೀವನ ಮಾಡುವ ಅವರು.

ಅವರು ಏನೂ ಮಾಡಿ ಹಣವನ್ನು ಗಳಿಸಿದರು ಹೆಸರು ಮಾಡಲು ಅವರಿಗೆ ಸಾಧ್ಯವಿಲ್ಲ ಎನ್ನಬಹುದು.

ಅಂತಹ ಅವರು ಬೇರೆ ಬೇರೆ ಪಕ್ಷದಲ್ಲಿ ಇದ್ದರು ಅವರನ್ನು ಪ್ರಭಾವಿ ಗಳು ಅವರ ಗೆಟ್ ಕಾಯಿಸುವ ಕೆಲಸವನ್ನು ನೀಡುತ್ತಾರೆ, ಅಲ್ಲಿಗೆ ಸೀಮಿತ ಮಾಡುತ್ತಾರೆ.

ರಾಜಕೀಯ ವಾಗಿ ವಂಚಿತರಾದ ಅವರು ತುಂಬಾ ಇದ್ದಾರೆ.

ಪ್ರಸ್ತುತ ರಾಜಕಾರಣಿಗಳು ಅವರನ್ನು ಹೆದರಿಸಿ ಬೆದರಿಸುವ, ತಂತ್ರಗಳನ್ನು ಮಾಡಿ ನಿಯಂತ್ರಣ ಮಾಡುತ್ತಾರೆ,
ಅವರ ಗೆ ಭಯ ಇರುತ್ತದೆ ಬದುಕು ಬೇಕು ಅನ್ನುವ ಆಸೆ ಇರುತ್ತದೆ,ಸಾಯುವ ಹಣೆ ಬರಹ ಇದ್ದರೆ ಅದನ್ನು ಯಾರು ತಪ್ಪಿಸಲು ಸಾಧ್ಯವಿಲ್ಲ.

ಅದಕ್ಕೆ ಈಹಿಂದೆ ಮಾನವ ಬಾಂಬ್ ಗಳು ಸೃಷ್ಟಿ ಮಾಡಿದ್ದಾರೆ.

ಇನ್ನುಮುಂದೆ ಪ್ರತಿ ವ್ಯಕ್ತಿ ಮಾನವ ಬಾಂಬ್ ಗಳು ಅಗವ ವಾತಾವರಣ ಬರಬಹುದು,ಸುಮ್ಮನೆ ಸಾಯಬಾರದು.

ಮುಳ್ಳನ್ನು ಮುಳ್ಳು ಯಿಂದ ತೆಗೆಯಬೇಕು,ಕೋಟಿ ಕೋಟಿ ಇದ್ದರೂ “ಕಾಡು”ಗೆ ಹೋಗಲೇ ಬೇಕು. (ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)


News 9 Today

Leave a Reply