ಅಸಂಘಟಿತ ಚಾಲಕರ ಕಾರ್ಮಿಕರಿಗೆ ಭದ್ರತಾ ಯೋಜನೆಯಗಳನ್ನು ಜಾರಿಗೊಳಿಸಿ ಅವರ ಕುಟುಂಬಕ್ಕೆ ಆಧಾರವಾಗುವಂತೆ ಕೋರಿ.
ಹುಂಡೇಕರ್ ರಾಜೇಶ್ ಒತ್ತಾಯ.
ಬಳ್ಳಾರಿ (5)
ಬಳ್ಳಾರಿ ಜಿಲ್ಲಾ ಅಟೋ ಚಾಲಕರ ಸಂಘ ಬಳ್ಳಾರಿ ಹುಂಡೇಕರ್ ರಾಜೇಶ್ ಅವರು
ಸಂತೋಷ್ ಲಾಡ್ರವರು, ಕಾರ್ಮಿಕ ಸಚಿವರು,ಗೆ
ಅಸಂಘಟಿತ ಚಾಲಕರ ಕಾರ್ಮಿಕರಿಗೆ ಭದ್ರತಾ ಯೋಜನೆಯಗಳನ್ನು ಜಾರಿಗೊಳಿಸಿ ಅವರ ಕುಟುಂಬಕ್ಕೆ ಆಧಾರವಾಗುವಂತೆ ಕೋರಿ ಒತ್ತಾಯ ಮಾಡಿದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲಿ ವಿವಿಧ ವಾಹನಗಳಿಗೆ ಚಾಲಕರಾಗಿ ಅವಿರತವಾಗಿ 24*7 ಸದಾ ಸೇವೆಯಲ್ಲಿ ತೊಡಗಿಸಿಕೊಂಡು ಸಾರ್ವಜನಿಕ ಸೇವೆಗಾಗಿ ಜೀವನವನ್ನು ಮುಡುಪಾಗಿಟ್ಟು ತಮ್ಮ ಕುಟುಂಬದ ಹಂಗನ್ನು ತೊರೆದು ಸೇವೆಯಲ್ಲಿ ಜೀವನ ಕಳೆಯುತ್ತಿರುವ ಚಾಲಕರ ತೆರಿಗೆಗಳಿಂದ ಸಾಕಷ್ಟು ಆದಾಯವು ತೆರಿಗೆ ರೂಪದಲ್ಲಿ ಸಂಗ್ರಹವಾಗುತ್ತಿದ್ದು, ಇಂತಹ ತೆರಿಗೆಯಿಂದ ಅವರ ಜೀವನಕ್ಕೆ ಆಧಾರ ಕಲ್ಪಿಸುವ ಯೋಜನೆಗಳನ್ನು ಜಾರಿತಂದು ಕರ್ನಾಟಕ ರಾಜ್ಯದ ಎಲ್ಲಾ ಚಾಲಕರ ಪರವಾಗಿ ಅವರ ಕುಟುಂಬಗಳ ಜೀವನಕ್ಕೆ ಆಧಾರವಾಗುವಂತೆ ಕೋರುತ್ತಿದ್ದೇವೆ.
ಈಗ ನೀಡಿರುವ ಕಾರ್ಮಿಕ ಕಾರ್ಡ್ನಿಂದ ಚಾಲಕರಿಗೆ ಯಾವುದೇ ರೀತಿಯ ಉಪಯೋಗವಾಗುತ್ತಿಲ್ಲ.
ತಾವುಗಳು ಕಾರ್ಮಿಕ ಮಂತ್ರಿಗಳಾಗಿದ್ದು, ಸದರಿ ಕಾರ್ಮಿಕರ ಬಗ್ಗೆ ಚಿಂತನೆ ನಡೆಸಿ ಸೂಕ್ತವಾದ ಯೋಜನೆಯನ್ನು ಜಾರಿಗೆ ತರುವ ಕುರಿತು ಪರಿಶೀಲಿಸಿ ಮುಂದಿನ ದಿನಗಳಲ್ಲಿ ಬರುವ ಬಡ್ಡಟ್ನಲ್ಲಿ ಕಾರ್ಮಿಕ ವರ್ಗಕ್ಕೆ ವಿಶೇಷವಾದ ಕೊಡುಗೆ (ಯೋಜನೆಯನ್ನು) ನೀಡಿ ಅವರ ಬಾಳಿಗೆ ಬೆಳಕಾಗುವಂತೆ ಮಾನ್ಯರಲ್ಲ ಕರ್ನಾಟಕ ರಾಜ್ಯದ ಎಲ್ಲಾ ಚಾಲಕರ ಪರವಾಗಿ ಕಳಕಳಿಯಿಂದ ಮನವಿ ಮಾಡಿದ್ದಾರೆ. ಬಳ್ಳಾರಿ ನಗರದ ರೇಡಿಯೋ ಪಾರ್ಕ್ ಬಳಿ ಸಚಿವರು ಗೆ ನೂರಾರು ಚಾಲಕರ ಜೊತೆ ಯಲ್ಲಿ ಮನವಿ ಪತ್ರ ಸಲ್ಲಿಸಿದರು.