*ಬಿಜೆಪಿ ಪಕ್ಷ ತೊರೆದು ಗ್ರಾಮೀಣ ಶಾಸಕ ಬಿ.ನಾಗೇಂದ್ರ ಸಮ್ಮುಖದಲ್ಲಿ ಕೈಗೆ ಸೇರ್ಪಡೆ.*
*ಬಳ್ಳಾರಿ (ಏ.10): ಬಿಜೆಪಿ ಸರ್ಕಾರಗಳ ಆಡಳಿತ ವೈಫಲ್ಯ ಹಾಗೂ ದುರಾಡಳಿತಕ್ಕೆ ಬೇಸತ್ತು ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಅಸುಂಡಿ ಗ್ರಾಮದ ಬಿಜೆಪಿ ಮುಖಂಡರು, ಕಾರ್ಯಕರ್ತರು ಇಂದು ಬಿಜೆಪಿ ತೊರೆದು ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಬಿ.ನಾಗೇಂದ್ರ ಅವರ ಸಮ್ಮುಖದಲ್ಲಿ ಅಸುಂಡಿ ಪರಮೇಶ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.*
*ಗ್ರಾಮೀಣ ಕ್ಷೇತ್ರದ ಅಸುಂಡಿ ಗ್ರಾಮದ ಪ್ರಮುಖ ಬಿಜೆಪಿ ಮುಖಂಡರಾದ ಸಣ್ಣ ನಾಗಪ್ಪರು ನಾಗರಾಜ, ಭಂಡಾರ ಭೀಮಪ್ಪ, ಬಿ.ಕೆ ರಮೇಶ್, ಬಸವರಾಜ್, ಶಿವರಾಮ್, ತಿಪ್ಪಣ್ಣ, ಶೇಖರ್, ಬಸವ, ಶಿವರಾಮ್, ನಾಗಣ್ಣ, ಎಲ್ಲಪ್ಪ, ಹನುಮಂತರೆಡ್ಡಿ, ನಾಗರಾಜ, ಶೇಖರ್ ಶುಂಠಿ, ಲಾಲೇಶ್, ಸದಾಕಲ್ಲಿ, ಹೊನ್ನೂರಸ್ವಾಮಿ, ಗಾದಿ, ನಾಗರಾಜ್, ಹನುಮಂತರೆಡ್ಡಿ ಕರ್ಜಿಕಾಯಿ, ನಾಗರಾಜ ಕರ್ಜಿಕಾಯಿ, ನಾಗರಾಜ ರಿಕ್ಕಿಬೀಲಿಂಗ ಸೇರಿದಂತೆ ಇನ್ನೂ ಅನೇಕ ಬಿಜೆಪಿ ಮುಖಂಡರನ್ನು ತುಂಬು ಹೃದಯದಿಂದ ಅವರನ್ನು ಶಾಸಕ ಬಿ.ನಾಗೇಂದ್ರ ಅವರು ಕಾಂಗ್ರೆಸ್ ಪಕ್ಷದ ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡು.*
*ಬಳಿಕ ಮಾತನಾಡಿದ ಮಾನ್ಯ ಶಾಸಕ ಬಿ.ನಾಗೇಂದ್ರ ಅವರು ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿಯಿಂದ ಬಹಳಷ್ಟು ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಬರುವವರಿದ್ದಾರೆ. ಜನರ ಸೇವೆ ಮಾಡಲು ಆಸಕ್ತಿ ಇರುವವರು ಯಾರು ಬೇಕಾದರೂ ಕಾಂಗ್ರೆಸ್ ಪಕ್ಷಕ್ಕೆ ಬರಬಹುದು ಎಂದು ಕರೆ ನೀಡಿದರು.*
*ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ನಂತರ ಮುಖಂಡರು ನಾವು ಮಾನ್ಯ ಶಾಸಕರ ಅಭಿವೃದ್ಧಿ ಕಾರ್ಯಗಳನ್ನು ಪರಿಗಣಿಸಿ ನಿಮ್ಮ ಬೆಂಬಲಕ್ಕಾಗಿ ಗ್ರಾಮದ ಬೆಳವಣಿಗೆಗಾಗಿ ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿ ಸೇರುವುದಾಗಿ ಹೇಳಿದರು.*
*ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ದಾರದ ಮಿಲ್ ಕೆ.ಮೋಹನ್, ಬಿ.ದುರುಗಣ್ಣ, ಅಸುಂಡಿ ಹನುಮೇಶ್, ಶಿವು, ಅಮರಾಪುರ ಗಾದಿಲಿಂಗಪ್ಪ, ಕಕ್ಕಬೇವಿನಹಳ್ಳಿ ಲಕ್ಷ್ಮಿ ರೆಡ್ಡಿ ಸೇರಿದಂತೆ ಇನ್ನೂ ಅನೇಕ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.*