*ಬಿಜೆಪಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ರಿಗ್ಗಿಂಗ್ ಮಾಡಲು ಯತ್ನ !!ವಾರ್ನಿಂಗ್ ಕೊಟ್ಟ ಕಟೀಲ್ ಜೀ.!!* ಬಳ್ಳಾರಿ ಯಲ್ಲಿ ಶುಕ್ರವಾರ ಬಿಜೆಪಿ ಕಚೇರಿಯಲ್ಲಿ, ರಾಜ್ಯ ಧ್ಯಕ್ಷರು ನಳಿನ್ ಕೂಮಾರ್ ಕಟೀಲ್ ನೇತೃತ್ವದಲ್ಲಿ ಮುಂಬರುವ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಬಿಜೆಪಿ ಪಕ್ಷದ ಮೂರು ಮಂದಿ ಅಭ್ಯರ್ಥಿ ಗಳನ್ನು ಅಯ್ಕೆ ಮಾಡಲು, ಪಕ್ಷದ ಪದಾಧಿಕಾರಿಗಳು ಗುಪ್ತ ಮತದಾನ ಮಾಡುವ ಮೂಲಕ, ಯಾರಿಗೆ ಹೆಚ್ಚಿನ ಮತಗಳು ಬರುತ್ತವೆ,ಅವರ ಕಾರ್ಯವೈಖರಿ ಹೇಗಿದೆ ಪಕ್ಷದಲ್ಲಿ ಅನ್ನುವ ನಿಟ್ಟಿನಲ್ಲಿ,ಪಕ್ಷದ ಪದಾಧಿಕಾರಿಗಳ ಮನೋಭಾವ ಹೇಗಿದೆ ಅಭ್ಯರ್ಥಿ ಗಳ ವಿಚಾರದಲ್ಲಿ ಅನ್ನುವ ಸರ್ವೇ ಪ್ರಕ್ರಿಯೆ ಒಂದು ಹಂತದ ಪಕ್ಷದ ಚೌಕಟ್ಟು ಯಲ್ಲಿ ಗುಪ್ತ ಮತದಾನ ಮಾಡಬೇಕು ಅನ್ನುವ ನೂತನ ಪದ್ದತಿಯನ್ನು ಮಾಡಲಾಗಿತ್ತು.
ಕಚೇರಿ ಯಲ್ಲಿ ಪದಾಧಿಕಾರಿಗಳು ಗಳಗೆ ಒಂದು ಬ್ಯಾಲೆಟ್ ಪೆಪರ್ ಮಾದರಿ ಯಲ್ಲಿ ಮೂರು ಅಂಕಗಳನ್ನು 1.2.3.ಹಾಕಿ,ಅದರಲ್ಲಿ ಪದಾಧಿಕಾರಿಗಳು ಸೂಚನೆ ಮಾಡುವ ಸೂಕ್ತ ಅಭ್ಯರ್ತಿ ಗಳ ಹೆಸರನ್ನು ಬರೆಯಲು, ಅದರ ಕಳಗೆ ಪದಾಧಿಕಾರಿಗಳು ಹೆಸರು ಮೊಬೈಲ್ ನಂಬರ್ ಹಾಕುವಂತೆ ತಯಾರಿಸಿದ ಪೇಪರ್ ನೀಡಲಾಗಿತ್ತು.
ಈಗಾಗಲೇ ಸ್ಪರ್ದೆ ಮಾಡುವ ಆಕಾಂಕ್ಷಿ ಗಳ ಪೈಕಿ ಮೂರು ಮಂದಿ ಹೆಸರುಗಳನ್ನು ಸೂಚನೆ ಮಾಡಿರುತ್ತಾರೆ.
ಆದರೆ ಅಭ್ಯರ್ಥಿ ಗಳನ್ನು ಅಯ್ಕೆ ಮಾಡುವ ಗುಪ್ತ ಮತದಾನ ನಡೆದಿಲ್ಲ ಏಂದು ಮಾಸ್ ಕಾಪಿ ಅಗಿದೆ ಏಂದು,ಯಾಲ್ಲರು ಒಂದೇ ಕಡೆಗೆ ಸೇರಿಕೊಂಡು ಅಜುಬಾಜ್ ಕೂತು ಕೊಂಡು ಒಬ್ಬರು ಗೆ ಒಬ್ಬರು ನೋಡಿಕೊಂಡು ಮತ್ತು ಕೆಲವರು ಇತರರ ಪೇಪರ್ ಗಳಲ್ಲಿ ಕೂಡ ಒಬ್ಬರೇ ಹೆಸರು ಬರೆಯುವ ಪ್ರಯತ್ನ ಅಗಿದೆ ಏಂದು, ಅದನ್ನು ನೋಡಿದ ಕಟೀಲ್ ಜೀ,ಪಾರದರ್ಶಕ ವಾಗಿ ನಡೆಯಬೇಕು,ಈ ರೀತಿಯಲ್ಲಿ ಅಗಬಾರದು ಏಂದು ಒಬ್ಬ ನಗರದ ಪ್ರಬಲ ಆಕಾಂಕ್ಷಿ ಗೆ ಕಾರ್ಯಕರ್ತರ ಸಮ್ಮುಖದಲ್ಲಿ, ತರಾಟೆಗೆ ತೆಗೆದುಕೊಂಡರು ಏಂದು ಬಲ್ಲ ಮೂಲಗಳ ಮಾಹಿತಿ ಅಗಿದೆ.
ಹೈ ಕಮಾಂಡ್ ಮುಂದೆ ರಿಗ್ಗಿಂಗ್ (ಮಾಸ್ ಕಾಪಿ) ಮಾದರಿಯಲ್ಲಿ ಓಟಗಳನ್ನು ಹಾಕಲು ಪ್ರಯತ್ನ ಮಾಡಿ,ಪಕ್ಷದ ಟಿಕೆಟ್ ಪಡೆಯಲು ಕೆಟ್ಟ ಸ್ಥಿತಿಯನ್ನು ಸೃಷ್ಟಿ ಮಾಡಿದ್ದಾರೆ ಏಂದು ತಿಳಿದು ಬಂದಿದೆ.
ಸಾರ್ವತ್ರಿಕ ಚುನಾವಣೆ ಏನೆ ಇರಲಿ, ಕನಿಷ್ಠ ಪಕ್ಷದ ಪದಾಧಿಕಾರಿಗಳು ಕೂಡ ಪಾರದರ್ಶಕ ಮತಚಲಾಯಿಸುವ ಸ್ವಾತಂತ್ರವನ್ನು,ಅವರ ಹಕ್ಕನ್ನು ಕದಿಯುತ್ತಾರೆ ಅಂದರೆ ಇವರು ಗೆ ಯಾವ ನೈತಿಕ ಮೌಲ್ಯಗಳು ಇದ್ದಾವೆ ಏಂದು ಪಕ್ಷದ ಪದಾಧಿಕಾರಿಗಳು ಪ್ರಶ್ನೆ ಮಾಡುತ್ತಾ ಇದ್ದಾರೆ?? ಗುಪ್ತವಾಗಿ.
ಪಕ್ಷದ ಕಚೇರಿ ಯಲ್ಲಿ ರಾಜ್ಯಾಧ್ಯಕ್ಷರು ಮುಂದೆ ನಡೆದ ಗುಪ್ತ ಮತದಾನ ಅಸಲಿ ಕಥೆಗಳನ್ನು ಸಾರ್ವಜನಿಕರ ವಲಯದಲ್ಲಿ ನಾಚಿಕೆ ಆಗುವ ರೀತಿಯಲ್ಲಿ ಮಾತನಾಡುತ್ತಾ ಇದ್ದಾರೆ.
ಪಕ್ಷದ ಮುಖಂಡರು ನೇರವಾಗಿ ಹೇಳಲು ಅಗದೆ ಅಡ್ಡ ಗೋಡೆ ಮೇಲೆ ದೀಪ ಇಟ್ಟಿದ್ದಾರೆ,ಇನ್ನೂ ಕೆಲವರು ಸತ್ಯದ ವಿಚಾರ ಅಗಿದೆ ನಡೆದಿದೆ ಏಂದು ನೋವಿನ ನಿಂದ ಹಂಚಿಕೊಂಡಿದ್ದಾರೆ.(ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ.)