ಸಚಿವ ಶ್ರೀ ರಾಮುಲು ಹೆಸರು ನಾಮ ಪತ್ತೆ..!! ರಾಜ್ಯ,ಕೇಂದ್ರದ ಐಕಾನ್ ಅಗಿರವ ಸಚಿವರ ಹೆಸರು ಔಟ್ ..!! ಬಳ್ಳಾರಿ13. (ಕಂಪ್ಲಿ)ತಾಲೂಕು ಆಡಳಿತ ಯಡವಟ್ಟಿಗೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರ ಹೆಸರು ಆಹ್ವಾನ ಪತ್ರಿಕೆಯಲ್ಲಿ ಮಂಗ ಮಾಯ : ಎಚ್ಚೇತ್ತ ನಂತರ ಮತ್ತೊಂದು ಆಹ್ವಾನ ಪತ್ರಿಕೆ ಮುದ್ರಣದಲ್ಲಿ ಸಚಿವರ ಹೆಸರು ಬಂತು
ಕಂಪ್ಲಿಯಲ್ಲಿ ಸೋಮವಾರ ನಡೆಯುವ ಸ್ವಾತಂತ್ರ್ಯ ದಿನಾಚರಣೆಯ ಆಹ್ವಾನ ಪತ್ರಿಕೆಯಲ್ಲಿ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರ ಹೆಸರನ್ನೇ ಕೈಬಿಟ್ಥು ಮುದ್ರಣ ಮಾಡಿರುವುದು ಎಷ್ಟರ ಮಟ್ಟಿಗೆ ಸರಿಯಿದೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ದೇಶಾದ್ಯಂತ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅಮೃತ ಮಹೋತ್ಸವವನ್ನಾಗಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಅದರಂತೆ ಕಂಪ್ಲಿಯಲ್ಲಿ ಅದ್ಧೂರಿ ಸ್ವಾತಂತ್ರ್ಯ ದಿನಾಚರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಲು ಸಂಬಂಧಪಟ್ಟ ಸಚಿವರು, ಶಾಸಕರು ಹಾಗೂ ಅಧಿಕಾರಿಗಳನ್ನು ಹಾಗೂ ಜನಪ್ರತಿಗಳನ್ನು ಆಹ್ವಾನ ಪತ್ರಿಕೆ ಮೂಲಕ ಕರೆಯಲಾಗುತ್ತಿದೆ. ಆದರೆ, ತಾಲೂಕು ಆಡಳಿತವು ಪ್ರಜ್ಞೆ ಇದ್ದೋ ಇಲ್ಲದೇನೋ ಎಂಬಂತೆ ಆಹ್ವಾನ ಪತ್ರಿಕೆಯಲ್ಲಿ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರ ಹೆಸರನ್ನೇ ಕೈಬಿಟ್ಟಿ ಯಡವಟ್ಟು ಮಾಡಿಕೊಂಡಿದೆ. ಈ ಮುದ್ರಣದ ಆಹ್ವಾನ ಪತ್ರಿಕೆಯಲ್ಲಿ ಸಚಿವರ ಹೆಸರು ಮಂಗ ಮಾಯವಾಗಿದೆ. ಸಚಿವರ ಹೆಸರಿಲ್ಲದೇ ಮುದ್ರಿಸಿದ ಕೆಲ ಆಹ್ವಾನ ಪತ್ರಿಕೆಗಳನ್ನು ಕೆಲವರಿಗೆ ನೀಡಲಾಗಿದೆ. ಆಹ್ವಾನ ಪತ್ರಿಕೆಯನ್ನು ತೆಗೆದು ನೋಡಿದಾಗ ತಾಲೂಕು ಆಡಳಿತದ ಯಡವಟ್ಟಿಗೆ ಸಚಿವರ ಹೆಸರೇ ಇಲ್ಲದಂತಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕೆಲವರು ತಾಲೂಕು ಆಡಳಿತದ ಯಡವಟ್ಟಿನ ವಿಷಯ ಅಧಿಕಾರಿಗಳಿಗೆ ತಿಳಿಸಿದ ನಂತರ ಎಚ್ಚೆತ್ತುಕೊಂಡ ತಾಲೂಕು ಆಡಳಿತವು ಸಚಿವ ಬಿ.ಶ್ರೀರಾಮುಲು ಅವರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಸೇರಿಸಿ ಮತ್ತೊಂದು ಮುದ್ರಣ ಮಾಡಿಸುವ ಮೂಲಕ ತಪ್ಪು ಸರಿಪಡಿಸಿಕೊಂಡಿದೆ. ಒಟ್ನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಎರಡು ಆಹ್ವಾನ ಪತ್ರಿಕೆಗಳನ್ನು ಮುದ್ರಿಸಿ, ಕಾರ್ಯಕ್ರಮಕ್ಕೆ ಸ್ವಾಗತಿಸುವ ಪರಿ ಇದಾಗಿದೆ. ಆಹ್ವಾನ ಪತ್ರಿಕೆ ಹಾಕಿಸುವ ಮುಂಚಿತವಾಗಿ ಗಮನಿಸಿದ್ದರೆ, ಇಂತಹ ಯಡವಟ್ಟಿಗೆ ಅವಕಾಶವಿರಲಿಲ್ಲ ಎಂಬಂತಾಗಿದೆ.ಈಗಾಗಲೇ ಸರ್ಕಾರದ ಭೂಮಿ ಪೂಜೆ ಗಳು ಗೆ,ಇತರೆ ಕಾರ್ಯಕ್ರಮ ಗಳಗೆ ,ಪ್ರಜಾ ಪ್ರತಿನಿಧಿ ಗಳನ್ನು ಆಹ್ವಾನ ಮಾಡದೇ, ಕಾರ್ಯಕ್ರಮ ಗಳು ಮಾಡುತ್ತಾರೆ,ಎಂದು ಕೆಲ ನಾಯಕರ ಗೋಳು ಇದೇ. ತುಂಬಾ ಕಷ್ಟ ಪಟ್ಟು ಉಸ್ತುವಾರಿ ಸಚಿವ ಸ್ಥಾನ ಪಡೆದರು, ಪದೇಪದೇ ಸಿದ್ದ ರಾಮಯ್ಯ ಅವರನ್ನು ಟೀಕೆ ಮಾಡುವ ಶಕ್ತಿ ವಂತರು,
ಪಕ್ಷದಲ್ಲಿ ದೊಡ್ಡ ನಾಯಕರು ಏಂದು ಗುರುತಿಸಲ್ಪಡುವ ಶ್ರೀ ರಾಮುಲು ಅವರ ಹೆಸರು ಅಧಿಕಾರಿಗಳ ಗೆ ಗೊತ್ತಿಲ್ಲ ವೇ..?? ಅಥವಾ ಇದರಲ್ಲಿ ಏನಾದರೂ ಅವರ ಗೌರವ ಕ್ಕೆ ದಕ್ಕಿ ತರುವ ಪ್ರಯತ್ನ ಮಾಡಿ ಇರಬಹುದು ಅನಿಸುತ್ತದೆ. ಪ್ರಸ್ತುತ ನಮ್ಮ ಜಿಲ್ಲೆಯ ಸಚಿವರು ಉಪಮುಖ್ಯಮಂತ್ರಿ ಆಗುವ ಕನಸು ದಲ್ಲಿ ಇದ್ದಾರೆ, ಅದು ಕೂಡ ಆಗಬಹುದು ಇಲ್ಲದಿದ್ದರೆ ಇಲ್ಲ.ಕೇಂದ್ರ ಮಟ್ಟದಲ್ಲಿ ಹೆಸರು ಪಡೆದ ಹೆಮ್ಮೆಯ ಸಚಿವ ಶ್ರೀ ರಾಮುಲು ಅವರ ಹೆಸರು ನಾಮ ಪತ್ತೆ ಆಗುತ್ತದೆ ಎಂದರೆ..!!ಸಾಧಾರಣವಾಗಿ ಯಾವುದಾದರೂ ಜಿಪಿ, ಟಿಪಿ,ZP.ಸದಸ್ಯರು ಆಗಿದ್ದರೆ, ಹೊಸದಾಗಿ,ಬಂದಿರುವ ಸದಸ್ಯರು ಗಳು ಆಗಿದ್ದರೆ ಹೆಸರು ಗೊತ್ತಿಲ್ಲ ಎಂದರೆ,ಅದಕ್ಕೆ ಅರ್ಥ ಇದೆ. ಇದು ಏನಾದರೂ ರಾಜಕೀಯ ಚದುರಂಗ ಇರಬಹುದೇ..?? (ಕೆ.ಬಜಾರಪ್ಪ ನ್ಯೂಸ್ ಬ್ಯೂರೋ ಕಲ್ಯಾಣ ಕರ್ನಾಟಕ.)
News 9 Today > State > ಸಚಿವ ಶ್ರೀ ರಾಮುಲು ಹೆಸರು ನಾಮ ಪತ್ತೆ..!! ರಾಜ್ಯ,ಕೇಂದ್ರದ ಐಕಾನ್ ಅಗಿರವ ಸಚಿವರ ಹೆಸರು ಔಟ್ ..!!
ಸಚಿವ ಶ್ರೀ ರಾಮುಲು ಹೆಸರು ನಾಮ ಪತ್ತೆ..!! ರಾಜ್ಯ,ಕೇಂದ್ರದ ಐಕಾನ್ ಅಗಿರವ ಸಚಿವರ ಹೆಸರು ಔಟ್ ..!!
Bajarappa13/08/2022
posted on

More important news
ಲಾರಿ ಮಾಲೀಕರ ಮುಷ್ಕರ
12/04/2025
ಮೀನುಗಳ ಮಾರಣ ಹೋಮ -ಕಾರಣ ನಿಗೂಢ.!?
10/04/2025
ಬಳ್ಳಾರಿ ಯಲ್ಲಿ ಉದೋಗ ಮೇಳ.
05/04/2025