ಇನ್ಸ್ಪೆಕ್ಟರ್ ವರ್ತನೆಗೆ ಡಿಸಿ ಅಗ್ರಹ,ಅಮಾನತ್ ಮಾಡಲು ಆದೇಶ.
ಡಿಸಿ ಆದೇಶ ಕ್ಕೆ ಗೌರವ ಸಿಗಬಹುದೇ??.
ಬಳ್ಳಾರಿ(2) ಸೋಮವಾರ ಪ್ರಾದೇಶಿಕ ಸಾರಿಗೆ ಕಚೇರಿಗೆ ರಸ್ತೆ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಬಳ್ಳಾರಿಯ ಜಿಲ್ಲಾಧಿಕಾರಿಗಳು ಪ್ರಶಾಂತ್ ಕುಮಾರ್ ಮಿಶ್ರಾ ಪೊಲೀಸ್ ವರಿಷ್ಠ ಅಧಿಕಾರಿಗಳು ಡಾ. ಶೋಭಾರಾಣಿ ಅವರು ಸಾರಿಗೆ ಕಚೇರಿಗೆ ಭೇಟಿ ನೀಡಿ ವಾಹನಗಳಿಗೆ ಕಡ್ಡಾಯವಾಗಿ ಸ್ಪೀಡ್ ಕಂಟ್ರೋಲ್ ಗವರ್ನರ್ ಅನ್ನು ಅಳವಡಿಸಲು ಸೂಚನೆ ನೀಡುತ್ತಾ ಸಾರಿಗೆ ಅಧಿಕಾರಿಗಳ ಜೊತೆಗೆ ಮಾಹಿತಿ ಪಡೆದುಕೊಳ್ಳುತ್ತಿದ್ದರು.
ಈ ಸಂದರ್ಭದಲ್ಲಿ ಹಲವಾರು ವರ್ಷಗಳಿಂದ ಬಳ್ಳಾರಿಯಲ್ಲೇ ಠಿಖಾನೆ ಹಾಕಿ ಕೊಂಡು ಇದ್ದ ಸಾರಿಗೆ ಇನ್ಸ್ಪೆಕ್ಟರ್, ಸಿ ಹೇಮಂತ್ ಕುಮಾರ್ ಎಲ್ಲಾ ವಾಹನ ಗಳಿಗೆ ಸ್ಪೀಡ್ ಗವರ್ನರ್ ಅಳವಡಿಸಲು ಸಾಧ್ಯವಾಗದೆಂದು, ಡಿಸಿ ಅವರು ಅನ್ನವ ಗೌರವ ಇಲ್ಲದೆ ಅಥಿಕ ಪ್ರಸಂಗ ವಾಗಿ ಮಾತನಾಡಿದ್ದು, ಜಿಲ್ಲಾ ಅಧಿಕಾರಿಗಳು ಗೆ ಆಕ್ರೋಶ ಬರುವಂತೆ ಮಾಡಿತ್ತು.
ಸಾರಿಗೆ ಅಧಿಕಾರಿಗಳು ಶ್ರೀನಿವಾಸ್ ಗಿರಿಯವರು ನಿಧಾನವಾಗಿ ಉತ್ತರ ಕೊಡುವ ಮುನ್ನವೇ ಸಿ. ಹೇಮಂತ್ ಕುಮಾರ್ ಇನ್ಸ್ಪೆಕ್ಟರ್ ಜಿಲ್ಲಾಧಿಕಾರಿಗಳು ಎನ್ನುವ ಗಮನವಿಲ್ಲದೆ ಅಡ್ಡ ದಿಡ್ಡುವಾಗ ಉತ್ತರ ಕೊಡಲು ಮುಂದೆ ಆಗಿದ್ದರು.
ಸಾವಿರ ನೂರಾರು ಜನಸಾಮಾನ್ಯರು ಇರುವ ಪ್ರದೇಶ ಅದು, ಡಿಸಿ ಅವರುಗೆ ಕನಿಷ್ಠ ಸರ್ ಅನ್ನುವ ಪದವನ್ನು ಬಳಿಕೆ ಮಾಡಿದೆ, ಅಗೌರವಾಗಿ ಮಾತನಾಡಿದ್ದು ಸಾರ್ವಜನಿಕರ ಮುಂದೆ ಜಿಲ್ಲಾಧಿಕಾರಿಗಳು ಎಂದರೆ ಸಾರಿಗೆ ಇನ್ಸ್ಪೆಕ್ಟರ್ ಹೇಮಂತ್ ಕುಮಾರ್ ಅವರ ಬಂಧು ಬಳಗ ಅನ್ನುವ ರೀತಿಯಲ್ಲಿ ವರ್ತನೆ ಮಾಡಿದ್ದು ಜನರ ಮುಂದೆ ಹಸಭ್ಯವಾಗಿತ್ತು.
ಇದೇ ಸಂದರ್ಭದಲ್ಲಿ ದೇಹದ ಮೇಲಿರುವ ಸರ್ಕಾರದ ಯೂನಿಫಾರಮ್ ಅನ್ನು ಸರಿಯಾಗಿ ಹಾಕಿಕೊಳ್ಳದೆ ಗುಂಡಿಗಳನ್ನು ಹೊರ ಬಿಟ್ಟುಕೊಂಡು ಸಿನಿಮಾ ವಿಲನ್ ಗಳು ರೇತಿ ಯಲ್ಲಿ ವರ್ತನೆ ಮಾಡುತ್ತಿರುವ ಸನ್ನಿವೇಶನ ನುಡಿದ ಪೊಲೀಸ್ ವರಿಷ್ಠಾಧಿಕಾರಿಗಳು ಅವರನ್ನು ಗದರಿಸಿ ಯೂನಿಫಾರಮ್ ಮೇಲೆ ಬಟನ್ ಹಾಕಿಕೊಳ್ಳಿ ಎಂದು ಆಕ್ರೋಶದಿಂದ ಹೇಳಿದ್ದಾರೆ.
ಜಿಲ್ಲಾಧಿಕಾರಿಗಳು ತಕ್ಷಣವೇ ಹೇಮಂತ್ ಕುಮಾರ್ ಅವರನ್ನು ಅಮಾನತು ಮಾಡಿ ಸರ್ಕಾರಕ್ಕೆ ಕಳಿಸಿಕೊಡಿ ಎಂದು ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳು ಸಾರಿಗೆ ಕಚೇರಿ ವೀಕ್ಷಣೆ ಸಂದರ್ಭದಲ್ಲಿ ಸುತ್ತಮುತ್ತಲ ಜನರು ನೋಡಲಾಗಿತ್ತು.
ಜಿಲ್ಲಾಧಿಕಾರಿಗಳು ಆದೇಶ
ಪಾಲೇನೆ ಆಗುತ್ತಾ ಇಲ್ಲವಾ ಎನ್ನುವುದು ಕಾದು ನೋಡಬೇಕಾಗಿದೆ.
ಸಾರಿಗೆ ಅಧಿಕಾರಿಗಳು ಶ್ರೀನಿವಾಸ್ ಗಿರಿ ಏನುಮಾಡುತಾರೆ, ಅನ್ನುವ ಪ್ರಶ್ನೆ ಹುಟ್ಟುಕೊಂಡಿದೆ.
[video width="848" height="478" mp4="https://news9today.in/wp-content/uploads/2025/06/VID-20250602-WA0039.mp4"][/video]
[video width="848" height="478" mp4="https://news9today.in/wp-content/uploads/2025/06/VID-20250602-WA0038.mp4"][/video]