ಕೋವಿಡ್ ಚಿಕಿತ್ಸೆ ನಿರ್ಲಕ್ಷತೆ
*ಶ್ಯಾವಿ ಆಸ್ಪತ್ರೆಗೆ 25 ಲಕ್ಷ ರೂ ದಂಡ*
ಬಳ್ಳಾರಿ : ಕೋವಿಡ್ ಚಿಕಿತ್ಸೆ ಸಂದರ್ಭದಲ್ಲಿ ನಗರದ ಶ್ಯಾವಿ ಆಸ್ಪತ್ರೆಯ ವೈದ್ಯಕೀಯ ನಿರ್ಲಕ್ಷತೆ ಎಸಗಿರುವುದರ ಬಗ್ಗೆ ನಗರದವರೇ ಆದ ಮಧುಸೂಧನ್ ಬಾಬು ಗ್ರಾಹಕರ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.
ವಿಚಾರಣೆ ನಡೆಸಿದ
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಎನ್.ತಿಪ್ಪೇಸ್ವಾಮಿ ಮತ್ತು ಸದಸ್ಯರಾದ ಮಾರ್ಲ ಶಶಿಕಲಾ ಅವರು. ದೂರುದಾರ ಮಗನಾದ ಪಿ. ವಿನಿತ್ ಮತ್ತು ಪತ್ನಿ ಲಕ್ಷ್ಮೀ ಸುಜಾತ ಅವರಿಗೆ ಕೋವಿಡ್ ಸೋಂಕು ಬಂದಿದ್ದರಿಂದ ಶ್ಯಾವಿ ನರ್ಸಿಂಗ್ ಹೋಂನಲ್ಲಿ ಚಿಕಿತ್ಸೆಗೆ ದಾಖಲಿಸಿತ್ತು.
ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡದ ಕಾರಣ ಮಗ ಮತ್ತು ಪತ್ನಿ ಮರಣ ಹೊಂದಿದ್ದಾರೆಂದು ಡಿಸಿಯವರಿಗೆ ವೈದ್ಯಕೀಯ ನಿರ್ಲಕ್ಷತೆ ಬಗ್ಗೆ ತನಿಖೆ ನಡೆಸುವಮನತೆ ದೂರು ನೀಡಿದ್ದರು.
ಡಿಸಿಯವರು ಡಿಹೆಚ್ ಓ ನೇತೃತ್ವದಲ್ಲಿ ತಜ್ಞರ ತಂಡ ರಚಿಸಿ. ಆಸ್ಪತ್ರೆಯ ಡಾ. ರಾಖೇಶ್ ಶ್ಯಾವಿ, ಡಾ.ನಂದಿನಿ ಮತ್ತು ಡಾ.ಚಂದ್ರಶೇಖರ್ ಹಾಗು ಆಸ್ಪತ್ರೆ ಸಿಬ್ಬಂದಿಯೊಂ ಹೇಳಿಕೆ ಪಡೆದು. ಕೋವಿಡ್ ಸೋಂಕು ನಿಯಂತ್ರಣಕ್ಕೆ ಸೂಕ್ತ ವೈದ್ಯರು ಇಲ್ಲದಿರುವುದು ಮತ್ತು ಕೋವಿಡ್ ನಿಯಂತ್ರಣದ ಮಾರ್ಗಸೂಚಿಗಳನ್ನು ಪಾಲನೆ ಮಾಡಿಲ್ಲವೆಂದು ವರದಿ ನೀಡಿತ್ತು.
ಈ ವರದಿ ಮತ್ತು ಆಸ್ಪತ್ರೆಯ ಚಿಕಿತ್ಸೆ ನೀಡಿದ ದಾಖಲೆ ಪರಿಶೀಲನೆ ನಡೆಸಿ, ಸೂಕ್ತ ಚಿಕಿತ್ಸೆ ದೊರೆಯದೆ ದೂರುದಾರರ ಮಗ ಮತ್ತು ಪತ್ನಿ ಮರಣ ಹೊಂದಿದ್ದಾರೆಂದು .
ಆಸ್ಪತ್ರೆ ವಿರುದ್ದ ವಿನಿತ ಸಾವಿಗೆ 15 ಲಕ್ಷ ರೂ ಮತ್ತು ಲಕ್ಷ್ಮೀ ಸುಜಾತ ಸಾವಿಗೆ 10 ಲಕ್ಷ ರೂ ಗಳನ್ನು ಶೇ 6 ಬಡ್ಡಿಯೊಂದಿಗೆ ಆದೇಶವಾದ 45 ದಿನದಲ್ಲಿ ಪಾವತಿಸಲು ಗ್ರಾಹಕರ ನ್ಯಾಯಾಲಯ ಆದೇಶ ನೀಡಿದೆಂದು ದೂರುದಾರರ ಪರ ವಕೀಲ ಎನ್.ಪ್ರಕಾಶ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.