ಡಾಕ್ಟರ್ ಸುನೀಲ್ ಕಿಡ್ನಾಪ್ ನಲ್ಲಿ 7.ಜನ ಆರೋಪಿಗಳು ಬಂಧನೆ. ಗಣಿನಾಡು ನಲ್ಲಿ ಗುಂಡಿನ ಸದ್ದು ಅಪರಾಧ ಗಳು ಮಾಡುವ ಅವರೆಗೆ ಸಿಂಹ ಸ್ವಪ್ನ ಆಗಿದ್ದ ಎಸ್ ಪಿ ಶೋಭರಾಣಿ.
ಬಳ್ಳಾರಿ (29) 25/01/2025 ರಂದು ಬಳ್ಳಾರಿ ನಗರದ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಡಾಃಸುನಿಲ್ ಕುಮಾರ್ ಮಕ್ಕಳ ತಜ್ಞರು, ಜಿಲ್ಲಾಸ್ಪತ್ರೆ, ಬಳ್ಳಾರಿ ರವರ ಕಿಡ್ನಾಪ್ ಆಗಿದ್ರು. ಗಾಂಧಿ ನಗರ ಠಾಣೆ ಯಲ್ಲಿ ಪ್ರಕರಣ ಧಾಖಲೆ ಆಗಿತ್ತು.
04/2025 500.142(2), 137(2), 142, 352, 351(2), 128(7), (8), 308(5)(7), 46, 61(1) 2.2.2. ಕಾಯ್ದೆ-2023 ಪ್ರಕರಣ ಧಾಖಲೆಆಗಿ ಇರುತ್ತದೆ. ಅಪಹರಣಕ್ಕೆ ಒಳಗಾದ ವ್ಯಕ್ತಿ ಡಾಃಸುನಿಲ್ ಕುಮಾರ್ ರವರನ್ನು ಪ್ರಕರಣ ವರದಿಯಾದ ದಿನದಂದು ರಕ್ಷಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದ್ದು, ಸದರಿ ಪ್ರಕರಣದ ತನಿಖೆಯನ್ನು ಶ್ರೀ.ಎಂ.ಎನ್.ಸಿಂದೂರ್ ಪೊಲೀಸ್ ನೀರಿಕ್ಷಕರು, ಬ್ರೂಸ್ಪೇಟೆ ಠಾಣೆ ರವರು ತನಿಖಾಧಿಕಾರಿಯಾಗಿದ್ದು, ತನಿಖೆ ಕೈಗೊಳ್ಳಲಾಗಿರುತ್ತದೆ.
ಸದರಿ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿತರು ತಲೆಮರೆಸಿಕೊಂಡಿದ್ದು, ಆರೋಪಿತರ ಪತ್ತೆ ಕಾರ್ಯಕ್ಕೆ ಶ್ರೀ ಬಿ.ಎಸ್. ಲೋಕೇಶ್ ಕುಮಾರ್, ಐ.ಪಿ.ಎಸ್, ಮಾನ್ಯ ಪೊಲೀಸ್ ಮಹಾನೀರಿಕ್ಷಕರು, ಬಳ್ಳಾರಿ ವಲಯ ರವರ ಮಾರ್ಗದರ್ಶನದಲ್ಲಿ ಡಾ:ಶೋಭಾ ರಾಣಿ, ಐ.ಪಿ.ಎಸ್. ಪೊಲೀಸ್ ಅಧೀಕ್ಷಕರು ಬಳ್ಳಾರಿ ರವರ ನೇತೃತ್ವದಲ್ಲಿ ಶ್ರೀ ಚಂದ್ರಕಾಂತ ನಂದಾರೆಡ್ಡಿ ಡಿ.ಎಸ್.ಪಿ. ಬಳ್ಳಾರಿ ಉಪವಿಭಾಗ, ಶ್ರೀ ಸಂತೋಷ್ ಚವಾಣ್ ಡಿ.ಎಸ್.ಪಿ. ಸೆನ್, ಶ್ರೀ ರಮೇಶ್ ಕುಲಕರ್ಣಿ ಪಿ.ಐ. ಶ್ರೀ.ಅಯ್ಯನಗೌಡ ಪಾಟೇಲ್ ಪಿ.ಐ., ಶ್ರೀ.ಸುಭಾಷ್ ಚಂದ್ರ ಪಿ.ಐ., ಪಿ.ಎಸ್.ಐ. ರವರಾದ ಶ್ರೀ ಸುರೇಶಪ್ಪ, ಶ್ರೀ.ತಿಮ್ಮಾರೆಡ್ಡಿ, ಹಾಗೂ ಗಾಂಧಿನಗರ ಮತ್ತು ಬ್ರೂಸ್ಪೇಟೆ ಠಾಣೆಯ ಕ್ರೈಂ ಸಿಬ್ಬಂದಿಯವರಾದ ಶ್ರೀ ಮಲ್ಲಿಕಾರ್ಜುನ ಎ.ಎಸ್.ಐ., ಶ್ರೀ.ಹೆಚ್.ಬಿ.ಮಲ್ಲಿಕಾರ್ಜುನ, ಎ.ಎಸ್.ಐ. ಗಾಂಧಿನಗರ, ಶ್ರೀ.ಜಯರಾಮ್ ಹೆಚ್.ಸಿ.259, ದಿನಕರ ಹೆಚ್.ಸಿ.227, ಕ್ರಿಷ್ಣಪ್ಪ ಹೆಚ್.ಸಿ.154, ಶ್ರೀನಿವಾಸ ಹೆಚ್.ಸಿ.228,ಸುಧಾಕರ್, ಹೆಚ್.ಸಿ. ಸೆನ್ ಪಿ.ಎಸ್. ಪಿ.ತಿಮ್ಮಪ್ಪ ಪಿ.ಸಿ.404, ಮಂಜುನಾಥ ಪಿ.ಸಿ.06, ಕೋಹ್ಲಿ ಕಾಳಿಂಗಪ್ಪ ಪಿ.ಸಿ.339, ಶಿವರಾಜ್, ಪಿ.ಸಿ.408, ಚಂದ್ರಶೇಖರ್ ಪಿ.ಸಿ.226, ದೊಡ್ಡ ಬಸವನಗೌಡ ಪಿ.ಸಿ.281, ರಾಮಾಂಜಿನಿ ಪಿ.ಸಿ.182 ಹಾಗೂ ತನಿಖಾ ಸಹಾಯಕ ಸಿಬ್ಬಂದಿಯಾದ ಶ್ರೀ.ಶ್ರೀನಿವಾಸಲು, ಎ.ಎಸ್.ಐ. ಮತ್ತು ಸಿಬ್ಬಂದಿಯವರನ್ನು ಒಳಗೊಂಡ ವಿಶೇಷ ತಂಡ ರಚಿಸಿದ್ದು, ಸದರಿ ತಂಡವು ಪ್ರಕರಣದಲ್ಲಿ ಭಾಗಿಯಾದ 7 ಆರೋಪಿತರನ್ನು ಪತ್ತೆ ಮಾಡಿ ಅಪರಾಧ ಕೃತ್ಯಕ್ಕೆ ಬಳಸಿದ ವಾಹನಗಳು, ಮೊಬೈಲ್ಗಳನ್ನು ಮತ್ತು ಇತರೆ ವಸ್ತುಗಳನ್ನು ಜಪ್ತು ಮಾಡಿದ್ದರೆ,ಇನ್ನೂ ಸದರಿ ಪ್ರಕರಣದಲ್ಲಿ ಭಾಗಿಯಾದ ಆರೋಪಿತರ ಪತ್ತೆ ಮಾಡಿ ಕಾನೂನು ಕ್ರಮ ತೆಗೆದುಕೊಳ್ಳುವ ಕುರಿತು ತನಿಖೆ ಕೈ ಗೊಂಡಿದ್ದಾರೆ.
ಅಪರಾಧ ಕೃತ್ಯದಲ್ಲಿ ಭಾಗಿಯಾದ ಆರೋಪಿತರ ಪೈಕಿ
1] ಎಸ್. ಶ್ರೀಕಾಂತ್ ತಂದೆ ಸಹದೇವ್ ವ: 44 ವರ್ಷ, ಈಡಿಗರ ಜನಾಂಗ, ಕಾರ್ ಚಾಲಕ ವಾಸ: ವಾರ್ಡ್ ನಂ: 21, ಕಿಡ್ಸ್ ಮಿಲ್ಲೆನಿಯಂ ಶಾಲೆ ಹತ್ತಿರ, ಬಸವೇಶ್ವರ ನಗರ, ಬಳ್ಳಾರಿ.
2] ವೈ.ಬೋಜರಾಜ ತಂದೆ ರಾಮಾಂಜಿನೇಯಲು ವ:25 ವರ್ಷ, ವಾಲ್ಮೀಕಿ ಜನಾಂಗ, ಕಾರ್ ಚಾಲಕ ವಾ: ಸೆಂಟ್ ಗೌತಮ್ ಶಾಲೆ ಹತ್ತಿರ, 1ನೇ ಕ್ರಾಸ್, ಪಟೇಲ್ ನಗರ, ಹದ್ದಿನಗುಂಡು ರಸ್ತೆ, ಬಳ್ಳಾರಿ.
3] ಎಸ್.ರಾಕೇಶ್ ತಂದೆ ಸೆಲ್ವರಾಜನ್ ವಃ 44 ವರ್ಷ, ಮೊದಲಿಯರ್ ಜನಾಂಗ, ಖಾಸಗಿ ಕೆಲಸ, ವಾಸಃ 15ನೇ ವಾರ್ಡ್, ಸೊಸೈಟಿ ಹತ್ತಿರ, ಹಳೆ ಅಮರಾವತಿ, ಹೊಸಪೇಟೆ, ವಿಜಯನಗರ ಜಿಲ್ಲೆ.
4] ಎಸ್. ಸಾಯಿ @ ಬಿಸ್ನಳ್ಳಿ ಸಾಯಿ ತಂದೆ ಲೇಟ್. ಸುಂಕಣ್ಣ ವ: 21 ವರ್ಷ, ವಾಲ್ಮೀಕಿ ಜನಾಂಗ, ಬಿಕಾಂ 2ನೇ ವರ್ಷದ ವಿದ್ಯಾಬ್ಯಾಸ ವಾಸ: ವಾರ್ಡ್ ನಂ:17, ತಾರನಾಥ ಆಸ್ಪತ್ರೆ ಹಿಂಭಾಗ, ಶೇಕ್ಷಾವಲಿ ದರ್ಗಾ ಹತ್ತಿರ, ಅನಂತಪುರ ರಸ್ತೆ, ಬಳ್ಳಾರಿ.
5] ಕೆ.ತರುಣ್ ಕುಮಾರ್ ತಂದೆ ಕೆ. ಚಂದ್ರಶೇಖರ್ ವ: 22 ವರ್ಷ, ಕುರುಬರು ಜನಾಂಗ, ಕಾರ್ ಚಾಲಕ ವಾಸ: ವಾರ್ಡ್ ನಂ:17, ಈಶ್ವರ್ ಗುಡಿ ಹತ್ತಿರ, ಕನಕದಾಸ ನಗರ, ಆಟೋ ನಗರ, ಅನಂತಪುರ ರಸ್ತೆ, ಬಳ್ಳಾರಿ.
6] ಉಮೇಶ್ ಯಾದವ್ @ ಅರುಣ್ @ ಪತ್ತಿ ತಂದೆ ಬಿ. ಓಭಳಾಪತಿ ವ: 25 ವರ್ಷ, ಯಾದವ್ ಜನಾಂಗ, ಟಾಟಾ ಎ.ಸಿ.ಇ. ಚಾಲಕ ಮತ್ತು ಮಾಲೀಕ ವಾಸ: ವಾರ್ಡ್ ನಂ:19, ಕುಮಾರಸ್ವಾಮಿ ಮನೆ ಹತ್ತಿರ, 4ನೇ ಕ್ರಾಸ್, ಎಸ್.ಎನ್. ಪೇಟೆ, ಬಳ್ಳಾರಿ.
7] ಕೆ. ಪುರುಷೋತ್ತಮ್ ತಂದೆ ಕೆ. ಸಿದ್ದಪ್ಪ ವ: 37 ವರ್ಷ, ಕುರುಬರು ಜನಾಂಗ, ವ್ಯವಸಾಯ ವಾಸ: ವಾರ್ಡ್ ನಂ: 20, ಮನೆ ಸಂ:91/92, 1ನೇ ಕ್ರಾಸ್, ಹರಿಪ್ರಿಯ ನಗರ, ಬಳ್ಳಾರಿ.2-
ಇಂದು ದಿನಾಂಕ 29/01/2025 ರಂದು ಬೆಳಿಗ್ಗೆ 06-30 ಗಂಟೆ ಸುಮಾರಿಗೆ ಸದರಿ ಪ್ರಕರಣದ ತನಿಖಾಧಿಕಾರಿ ಎಂ.ಎನ್.ಸಿಂಧೂರ ಮತ್ತು ತಂಡದವರು ಸದರಿ ಪ್ರಕರಣದಲ್ಲಿ ಭಾಗಿಯಾದ ಆರೋಪಿ-ಎಸ್. ಶ್ರೀಕಾಂತ್ ತಂದೆ ಸಹದೇವ್ ರವರನ್ನು ಬಂಧಿಸಿ ತನಿಖೆಗೆ ಒಳಪಡಿಸಿ ಕೃತ್ಯಕ್ಕೆ ಬಳಿಸಿದ ಸ್ವತ್ತುಗಳನ್ನು ವಶಪಡಿಸಿಕೊಳ್ಳುವ ತನಿಖೆ ಪ್ರಕ್ರಿಯೆದಲ್ಲಿದ್ದಾಗ ಸದರಿ ಆರೋಪಿತನು ಪೊಲೀಸ್ ವಶದಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ತನಿಖಾ ತಂಡದ ಪೊಲೀಸ್ ಸಿಬ್ಬಂದಿ ಗಾಂಧಿನಗರ ಠಾಣೆಯ ಸಿ.ಪಿ.ಸಿ.350 ಕೊಹ್ಲಿ ಕಾಳಿಂಗಪ್ಪ ರವರ ಮೇಲೆ ಮರಣಾಂತಿಕ ಹಲ್ಲೆ ಮಾಡುತ್ತಿದ್ದಾಗ ಸ್ವಯಂ ಆತ್ಮರಕ್ಷಣೆಗಾಗಿ ತನಿಖಾಧಿಕಾರಿ ಎಂ.ಎನ್.ಸಿಂಧೂರ ಪಿ.ಐ. ರವರು ಆರೋಪಿ-ಶ್ರೀಕಾಂತನ ಕಾಲಿಗೆ ಫೈರ್ ಮಾಡಿದ್ದು ಶ್ರೀಕಾಂತಿನ ಕಾಲಿಗೆ ರಕ್ತಗಾಯವಾಗಿದ್ದು ಹಾಗೂ ಸಿ.ಪಿ.ಸಿ.350 ಕೊಹ್ಲಿ ಕಾಳಿಂಗಪ್ಪ ರವರ ಎದೆಗೆ ಒಳಪೆಟ್ಟು ಮತ್ತು ದೇಹದ ಮೇಲೆ ಅಲೆಲ್ಲಿ ತೆರಚಿದ ಗಾಯವಾಗಿದ್ದು ಪ್ರಸ್ತುತ ಗಾಯಾಳುಗಳನ್ನು ಬಳ್ಳಾರಿ ಮಾ ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕಳಸ ಲಾಗೆದೆ.
ಆರೋಪಿತರನ್ನು ಪತ್ತೆ ಮಾಡಿ ನ್ಯಾಯಾಂಗ ಬಂಧನಕ್ಕೆ ಕಳುಹಿಸುವ ಕುರಿತು ಕಾನೂನು ಕ್ರಮ ಕೈಗೊಳ್ಳಲಾಗಿದ್ದು, ಸದರಿ ಪ್ರಕರಣವು ವರದಿಯಾಗಿ 48 ಗಂಟೆಯಲ್ಲಿ ಆರೋಪಿತರನ್ನು ಪತ್ತೆ ಮಾಡಿದ ವಿಶೇಷ ತಂಡದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯ ಕಾರ್ಯವನ್ನು ಶ್ಲಾಘನೆ ಮಾಡಿ ಸೂಕ್ತ ಬಹುಮಾನ ಘೋಷಿಸಲಾಗಿದೆ ಎಂದು S.ಪಿ. ಶೋಭರಾಣಿ ತಿಳಿಸಿದ್ದಾರೆ. ಗಣಿ ನಾಡು ನಲ್ಲಿ ಪೊಲೀಸ್ರು ಆರೋಪ ಗಳು ಮೇಲೆ ಗುಂಡುನ ದಾ ಳಿ ದಿಂದ ಅಪರಾಧ ಗಳು ಗೆ ಭಯದ ವಾತಾವರಣ ಸೃಷ್ಟಿ ಆಗಿದೆ. S.ಪಿ ಜನರ ಮೆಚ್ಚುಗೆ ಪಡೆದ್ದಾರೆ.
[video width="960" height="540" mp4="https://news9today.in/wp-content/uploads/2025/01/VN20250129_115436.mp4"][/video]