ಅತಿ ವೇಗವಾಗಿ ಹೊರಡುತ್ತಿರುವ ಹಕ್ಕಿ ಜ್ವರ ಸಾವಿರಾರು ಕೋಳಿಗಳ ಮರಣ ಮೃದಂಗ. ಪಂಚಾಯತಿನಲ್ಲಿ ಅನುಮತಿ ಇಲ್ಲ ಕೋಳಿ ಫಾರಂ ಗೆ. ಬಾಲಕಾರ್ಮಿಕರು ಕೆಲಸದಲ್ಲಿ.
• ಕೋಳಿಗಳನ್ನು ಮಣ್ಣು ಮಾಡಲು ನಿರ್ಲಕ್ಷ.
ಬಳ್ಳಾರಿ(1) ತಾಲೂಕಿನ ಕಪ್ಪಗಲ್ಲು ಗ್ರಾಮದಲ್ಲಿ ಎರಡು ದಿನದಿಂದ ಸತತವಾಗಿ 10 ಸಾವಿರ ದಿಂದ 15 ಸಾವಿರ ಕೋಳಿ ಗಳು ಮೃತ ಪಟ್ಟಿದ್ದು,ಅದರ್ರೇ ಶನಿವಾರದವರಿಗೆ ಅಧಿಕಾರಿಗಳಿಗೆ ಯಾವುದೇ ಮಾಹಿತಿ ಇಲ್ಲ.!! "ನ್ಯೂಸ್ 9 ಟುಡೇ ಇನ್" ಸೋಶಿಯಲ್ ಮಿಡಿಯಾ ದಲ್ಲಿ ವರದಿಯಾದ ಕೂಡಲೇ ಅಧಿಕಾರಿಗಳು ಎಚ್ಚೊತ್ತುಕೊಂಡು ಕೋಳಿ ಫಾರಂ ಕಡೆ ದೌಡಾಯಿಸಿದ್ದಾರೆ.
ಆದರೆ ಕೋಳಿ ಫಾರಂನಲ್ಲಿ ಎರಡು ದಿನದಿಂದ ಸಾವನ್ನಪ್ಪಿದ ಕೋಳಿಗಳು ಸಾಲು ಸಾಲು ಹಾಗೆ ಬಿದ್ದಿರುವುದು ಕಂಡುಬಂದಿದೆ.
ಒಂದಿಷ್ಟು ಕೋಳಿಗಳನ್ನು ಮಾತ್ರ ಗುಂಡಿಗೆ
ಆವೈಜ್ಞಾನಿಕವಾಗಿ ಮುಚ್ಚಲು ಕೋಳಿ ಮಾಲೀಕರು ಪ್ರಯತ್ನ ಪಟ್ಟಿದ್ದು ಅಧಿಕಾರಿಗಳಿಗೆ ಕಂಡು ಬಂದಿದೆ.
ಆದರೆ ಅಲ್ಲಿ ಕೆಲ ಬಾಲಕಾರ್ಮಿಕರನ್ನು ಕೂಡ ಕೆಲಸದಲ್ಲಿ ಇಟ್ಟುಕೊಂಡಿರುವುದು ಅಲ್ಲಿಯ ಆಶಾ ಕಾರ್ಯಕರ್ತರಿಗೆ ಕಂಡು ಬಂದಿದೆ.
ಕೋಳಿಗಳು ಸತ್ತು ಎರಡು ದಿನವಾದರೂ ಸರಿಯಾಗಿ ಸ್ವಚ್ಛತೆಯನ್ನು ಕಾಪಾಡದೆ ನಿರ್ಲಕ್ಷ್ಯ ಮಾಡಿರುವುದು ಕಂಡುಬರುತ್ತದೆ.
ಅಧಿಕಾರಿಗಳು ಪರಿಶೀಲನೆ ಮಾಡಲಾಗಿ ಕೋಳಿ ಫಾರಂ ಸುತ್ತು ಮತ್ತು ಒಂದು ಕಿಲೋಮೀಟರ್ ಕ್ವಾರೆಂಟೇನ್ ಮಾಡಲಾಗಿದೆ.
ಕೋಳಿ ಫಾರಂನಲ್ಲಿ ಕೆಲಸ ಮಾಡಿದವರಿಗೆ 10 ದಿನ ಹೊರಗೆ ಹೋಗದಂತೆ ಕ್ವಾರಂಟೈನ್ ಮಾಡಲು ಪಶು ಸಂಗೋಪನೆ ಇಲಾಖೆಯ ತಾಲೂಕ ನೋಡಲ್ ಅಧಿಕಾರಿ ಶ್ರೀನಿವಾಸ ಅವರು ದೂರವಾಣಿ ಮುಖಾಂತರ ತಿಳಿಸಿದ್ದಾರೆ.
ಸತ್ತು ಕೋಳಿಗಳ ಮಾದರಿಯನ್ನು ಭೂಪಾಲ್ ಲ್ಯಾಬ್ ಗೆ ಕಳಿಸಲಾಗಿದೆ ಅಲ್ಲಿಂದ ಪೂರ್ತಿ ವರದಿ ಬರುತ್ತೆ ಎಂದು ತಿಳಿಸಿದ್ದಾರೆ.
ಸಾವನ್ನಪ್ಪಿದ ಕೋಳಿಗಳನ್ನು 10 ಅಡಿ ಗುಂಡಿಯಲ್ಲಿ,ಉಪ್ಪು ಸೋಡಿಯ0 ಕ್ಲೋರಿನ್,ಕೆಮಿಕಲ್ ಮುಂತಾದ ಕೆಮಿಕಲದಿಂದ ಹಾಕಿ ಮುಚ್ಚ ಬೇಕು ಇಲ್ಲದಿದ್ದರೆ ಸುತ್ತಮುತ್ತ ಪ್ರದೇಶಗಳ ಕೋಳಿಗಳು ಗೆ ಕೂಡ ಈ ಕಾಯಿಲೆಹರಡುವ ವಾತಾವರಣವಿರುತ್ತದೆ, ಜನರು ಗೆ ಕೂಡ ಸ್ವಲ್ಪ ತೊಂದ್ರೆ ಆಗುತ್ತೆ ಎಂದು ಸೂಚನೆ ನೀಡಿದ್ದಾರೆ.
ಆದರೆ ಇವರಿಗೆ ಕೋಳಿ ಫಾರಂನ ಮಾಲೀಕರು ಯಾವುದೇ ಕ್ರಮ ಕೈಗೊಳ್ಳದೆ ಹಾಗೆ ಫಾರಂನಲ್ಲಿ ಸತ್ತು ಕೋಳಿಗಳನ್ನು ಇಟ್ಟಿದ್ದಾರೆ, ಎಂಬುದು ತಿಳಿದು ಬಂದಿದೆ, ಸ್ವಲ್ಪ ಕೋಳಿ ಗಳನ್ನು ಮಾತ್ರವೇ ಮುಚ್ಚಿದ್ದಾರೆ.
ಶನಿವಾರ ಬಿಳ್ಳಂಬೆಳಗ್ಗೆ ಹಸು ಸಂಗೋಪನ ಇಲಾಖೆ ಅಧಿಕಾರಿಗಳು ತಾಲೂಕ ಪಂಚಾಯತ್ ಅಧಿಕಾರಿಗಳು ಆಶಾ ಕಾರ್ಯಕರ್ತರು ಕೋಡಿ ಫಾರಂ ಗೆ ಭೇಟಿ ನೀಡಿ ಅವರಿಗೆ ಪೂರ್ತಿ ಮಾಹಿತಿಯನ್ನು ತಿಳಿಸಿ ಸ್ಥಳವನ್ನು ಪರಿಶೀಲನೆ ಮಾಡಿದ್ದಾರೆ.
ದಿನ ದಿನಕ್ಕೆ ಹಕ್ಕಿ ಜ್ವರ ಅತಿ ವೇಗವಾಗಿ ಹೊರಡುತ್ತಿದ್ದು ಜನರಲ್ಲಿ ಆತಂಕ ಮೂಡಿದೆ.
ಎರಡು ದಿನದಿಂದ ಕೋಳಿ ಫಾರಂನಲ್ಲಿ ಸತ್ತು ಕೋಳಿಗಳ ಜೊತೆಯಲ್ಲಿ ಜೆಸಿಬಿ ಡ್ರೈವರ್ ಗಳು, ಕೂಲಿಕಾರ್ಮಿಕರು ಕೆಲಸ ಮಾಡಿದ್ದು ಅವರ ಅರೋಗ್ಯ ಪರಿಸ್ಥಿತಿ ಹೇಗಿದೆ ಎಂದು ನೋಡಬೇಕು ಆಗಿದೆ. ಇದರ ಮಾಲೀಕರು ಆಗಿರುವ, ರವಿ ಬಾಬು ಕೆಲ ತಿಂಗಳ ಗಳ ದಿಂದ ಕೋಳಿ ಫಾರಂ ಮಾಡುತಾ ಇದ್ದಾರೆ, ಇದರಲ್ಲಿ ಕೆಲ ದಿನಗಳು ಹೆಂದೆ ಒಂದಿಷ್ಟು ಕೋಳಿಗಳು ಮಾರಾಟ ಮಾಡಿದ್ದಾರೆ.
ಇನ್ನು ಉಳಿದ ಕೋಳಿ ಗಳು ಸ್ವಲ್ಪ ದಿನದಲ್ಲಿ ಮಾರಾಟ ಮಾಡಬೇಕು ಆಗಿತ್ತು,ಅಷ್ಟರಲ್ಲಿ ಕಾಯಲೇ ಬಂದು ಮೃತ ಪಟ್ಟಿದ್ದಾವೆ.
ರವಿ ಕುಮಾರ್ ಅನ್ನುವ ಅವರು ಜೆಲ್ಲೆಯ ವಿಜಯನಗರ ಕೋಳಿ ಸಾಗಣೆಕೆ ಅವರು ದಿಂದ ಕೋಳಿ ಮರಿಗಳು ತಗದುಕೊಂಡು, ಅವುಗಳನ್ನು ಮಾರುಕಟ್ಟೆಗೆ ಮಾರಾಟ ಆಗೋವರೆಗೆ ಬೆಳೆಸಿ ತದನಂತರ ವಿಜಯನಗರ ಕೋಳಿ ಫಾರ್ಮ್ ಅವರ ಮುಖಾಂತರನೇ ಮಾರಾಟ ಮಾಡಬೇಕಾಗುತ್ತದೆ.
ಅದರಲ್ಲಿ ರವಿಬಾಬು ಅವರಿಗೆ ಕೆಜಿಗೆ ಹತ್ತು ರೂಪಾಯಿ ಕಮಿಷನ್ ಅನ್ನುವ ಬಿಜಿನೆಸ್ ಹೊಂದಾಣಿಕೆಯನ್ನು ಮಾಡಿಕೊಂಡು ಕೋಳಿ ಫಾರಂ ಮಾಡುತಾ ಇರುತ್ತಾರೆ ಎನ್ನವ್ದು ತಿಳಿದು ಬಂದಿದೆ.ಕಪ್ಪಗಲ್ಲು ಗ್ರಾಮದಲ್ಲಿ ಕೋಳಿಗಳು ಮೃತ ಪಟ್ಟ ಮಾಹಿತಿ ತಿಳಿದು ಕೊಡಲೇ ಡಿಸಿ, ಸಿಇಓ ಅವರು ತಕ್ಷಣವೇ ಗಮನಹರಿಸಿ, ಸಿಬ್ಬಂದಿ ಗೆ ಗಳನ್ನು ಎಚ್ಚರ ಮಾಡಿದ್ದಾರೆ. ಸಿಬ್ಬಂದಿ ಪಿ ಪಿ ಇ ಕಿಟ್ಟು ಗಳು ಮೂಲಕ ಕೋಳಿಫಾರಂ ಪರಿಶೀಲನೆ ಮಾಡಿದ್ದಾರೆ.
[video width="960" height="540" mp4="https://news9today.in/wp-content/uploads/2025/03/VN20250301_143332.mp4"][/video]