


ಬಳ್ಳಾರಿ (31)ಹಲವಾರು ವರ್ಷಗಳಿಂದ ಸಾರಿ ಇನ್ಸ್ಪೆಕ್ಟರ್ ಆಗಿ ಜಿಲ್ಲೆಯಲ್ಲಿ ಸೇವೆಯನ್ನು ಸಲ್ಲಿಸುತ್ತಾ ಎ ಆರ್ ಟಿ ಓ ಪ್ರಮೋಷನ್ ಪಡೆದು ಶನಿವಾರ ನಿವೃತ್ತಿ ಯಾಗಿದ್ದಾರೆ.
ಆದರೆ ನಿವೃತ್ತಿ ಹಂತದಲ್ಲಿರುವ ಸಂದರ್ಭದಲ್ಲಿ ಕೆಲ ದಿನಗಳ ಹಿಂದೆ ನಡು ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಿ ಇತಿಮಿತಿಯಲ್ಲಿದೆ ಹಣ ವಸೂಲಿ, ಊಹಕ್ಕೆ ಮೀರಿ ಭ್ರಷ್ಟಾಚಾರ ಮಾಡುತ್ತಿರುವುದು ಬಹಿರಂಗವಾಗಿ ವಿಡಿಯೋಗಳಲ್ಲಿ ವೈರಲ್ ಆಗಿತ್ತು, ತದನಂತರ ಎಷ್ಟೋ ಬಾರಿ ಚೆಕ್ ಪೋಸ್ಟ್ ಗಳು ಬಳಿ ಕೂಡ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದು ಹಣವನ್ನು ಕಿಟಕಿಗಳಿಂದ ಹೊರಗಡೆ ಚೆಲ್ಲಿದ್ದಾರೆ ಎಂದು ಆರೋಪ ಕೂಡ ಬೆಳಕಿಗೆ ಬಂದಿತ್ತು.
ಬಳ್ಳಾರಿ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ್ದ ಹೇಮಂತ್ ಕುಮಾರ್ ಡ್ರೈವಿಂಗ್ ಲೈಸೆನ್ಸ್ ಏಜೆಂಟ್ ರ ಹತ್ತಿರ ಕೂಡ ಅಧಿಕ ಹಣವನ್ನು ಪಡೆಯುವುದು ಭ್ರಷ್ಟಾಚಾರ ಮಾಡುತ್ತಿರುವುದು ಕೂಡ ಬಹಹಿರಂಗ ವಿಚಾರ ಆಗಿದೆ.
ಇದೇ ವಿಚಾರವಾಗಿ ಡ್ರೈವಿಂಗ್ ಲೈಸೆನ್ಸ್ ಅಧಿಕೃತ ಏಜೆಂಟ್ರು ಎಷ್ಟೋ ಬಾರಿ ಅಧಿಕಾರಿಗಳಿಗೆ ದೂರು ಕೂಡ ಸಲ್ಲಿಸಿದ್ದಾರೆ.
ಆದರೆ ಹೇಮಂತ್ ಕುಮಾರ್ ಅವರನ್ನು ಯಾರು ಏನು ಮಾಡಲು ಸಾಧ್ಯವಾಗಿಲ್ಲ ಎಂದು ಆರ್ ಟಿ ಓ ಕಚೇರಿ ವಲಯದಲ್ಲಿ ಕೇಳಿ ಬರುತ್ತದೆ.
ಹೇಮಂತ್ ಕುಮಾರ್ ಭ್ರಷ್ಟಾಚಾರ ಮಾಡೋದ್ರಲ್ಲಿ ತಜ್ಞರು ಎನ್ನುವುದು ಇದರಿಂದ ಅಧಿಕ ಸಂಪತ್ತು ಸಾರಿಗೆ ಅಧಿಕಾರಿಗಳಿಗೆ ದೊಡ್ಡಮಟ್ಟದಲ್ಲಿ ಬರುತ್ತದೆ ಎಂದು ಇದರ ಉಸ್ತುವಾರಿ ಸಂಪೂರ್ಣ ಹೇಮಂತ್ ಕುಮಾರ್ ಅನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತದೆ.
ಹೇಮಂತ್ ಕುಮಾರ್ ಒಂದಿಷ್ಟು ಖಾಸಗಿ ಪಡೆಯನ್ನು ತಯಾರು ಮಾಡಿಕೊಂಡು ಅವರ ಮುಖಾಂತರ ಹಣ ವಸೂಲಿ ಮಾಡಿ ಕೋಟಿಗಟ್ಟಲೆ ಸಂಪಾದನೆ ಮಾಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತದೆ.
ಸಾರಿಗೆ ಇಲಾಖೆಯಲ್ಲಿ ರಹಸ್ಯವಾಗಿ ಯಾರನ್ನು ವಿಚಾರ ಮಾಡಿದರು ಕೂಡ ಅತ್ಯಂತ ಕಡು ಭ್ರಷ್ಟ ವ್ಯವಸ್ಥೆಯನ್ನುಮಾಡಿ ಹಾಳು ಮಾಡಿರುವ ಅಧಿಕಾರಿ ಯಾರು ಅಂದರೆ ಹೇಮಂತ್ ಕುಮಾರ್ ಅನ್ನೋದು ಕೇಳಿ ಬರುತ್ತದೆ.
ಆದರೆ ಇವರ ಭ್ರಷ್ಟಾಚಾರದ ಪಾಪದಲ್ಲಿ ಪ್ರತಿಯೊಬ್ಬ ಅಧಿಕಾರಿಗೆ ಕೂಡ ಪಾಲು ಇದೇ ಎನ್ನುವುದು ಕೂಡ ಕೇಳಿಬರುತ್ತದೆ.
ಇದೇ ಇಲಾಖೆಯಲ್ಲಿ ಇನ್ಸ್ಪೆಕ್ಟರ್ ಆಗಿ Arto ಯಾಗಿ ಪ್ರಸ್ತುತ ಸಾರಿಗೆ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿರುವ ಶ್ರೀನಿವಾಸ್ ಗಿರಿಯವರು ಕೂಡ ಮೌನವಾಗಿರುವುದು ಮತ್ತಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಸಾರಿಗೆ ಇಲಾಖೆಯಲ್ಲಿ ನೂತನ ಅಧಿಕಾರಿಗಳು ಯಾರಾದರೂ ಬರುವುದಿದ್ದರೆ ಅಂತವರನ್ನು ಕೂಡ ಬರೆದಂತೆ ಇಲ್ಲಿ ಕಷ್ಟ ಇದೆ ಕೆಲಸ ಮಾಡಲು ಆಗೋದಿಲ್ಲ, ತಮ್ಮಿಷ್ಟ ಎಂದು ಅವರಗೆ ಹೆದರಿಕೆ ಬೆದರಿಕೆ ಹಾಕಿ ಅವರನ್ನು ಬರೆದಂತೆ ತಡೆಗಟ್ಟುವುದು ಇಲ್ಲಿಯ ಸಾರಿ ಅಧಿಕಾರಿ ಪ್ರಥಮ ಕರ್ತವ್ಯವಾಗಿದೆ.
ಹೊಸಬರು ಬಂದರೆ ಹೇಮಂತ್ ಕುಮಾರ್ ಗೆ ಕಷ್ಟ ಆಗುತ್ತದೆ ಅವರ ಮಾಡುವ ಭ್ರಷ್ಟಾಚಾರಕ್ಕೆ ಬ್ರೇಕ್ ಆಗುತ್ತೆ ಎಂದು.
ಅದರಿಂದ ಇವರೆಲ್ಲರಿಗೆ ಹಣದ ಆದಾಯದ ಮೂಲ ನಿಂತು ಹೋಗುತ್ತದೆ ಎನ್ನುವ ಕೆಟ್ಟ ಆಲೋಚನೆ ಇಟ್ಟುಕೊಂಡ, ಕುಳ್ಳಧಿಕಾರಿ.
ಸಾರಿಗೆ ಇಲಾಖೆಯಲ್ಲಿ ಮುಖ್ಯಸ್ಥರು ಇನ್ಸ್ಪೆಕ್ಟರ್ಗಳು ಪ್ರತಿದಿನ ಲಕ್ಷಾನುಗಟ್ಟಲೆ ಭ್ರಷ್ಟಾಚಾರದ ಹಣವನ್ನು ಗಳಿಸ್ತಿದ್ದಾರೆ.
ಇಲಾಖೆಯಲ್ಲಿ ಪ್ರತಿ ಫೇಲ್ ಗೆ ಅದಿಕೆ ಲಂಚವನ್ನು ಕೊಟ್ಟು ಕೆಲಸವನ್ನು ಮಾಡಿಸಿಕೊಳ್ಳುವ ಕೆಟ್ಟ ಸಂಪ್ರದಾಯಕ್ಕೆ ಇಲಾಖೆ ನಿಂತಿದೆ, ಸಣ್ಣದಾದ ಡಿ, ಎಲ್,ಪಡೆಯಲು ಕೂಡ ನೂರು ರೂಪಾಯಿ ದಿಂದ ಹಿಡಿದು ಇನ್ನು ಉಳಿದ ಆವಗಳುಗೆ ಒಂದು ಲಕ್ಷದ ವರೆಗೆ ಲಂಚ ಪಡೆಯುತ್ತಿದ್ದಾರೆ ಎನ್ನುವುದು ಪ್ರತಿ ಏಜೆಂಟ್ ನ ಬಾಯಲ್ಲಿ ಕೇಳಿಬರುತ್ತದೆ.
ಸಾರಿಗೆ ಇಲಾಖೆಯ ಭ್ರಷ್ಟಾಚಾರ ದಿನ ದಿನಕ್ಕೆ ಬೆಳೆಯುತ್ತಲೇ ಇದೆ.
ಇದು ಒಂದು ಹಂತಾದರೆ ಶನಿವಾರ ನಿವೃತ್ತಿಯಾಗಿದ್ದ ಹೇಮಂತ್ ಕುಮಾರ್ ಒಂದು ತಿಂಗಳ ಹಿಂದೆ ಸರಿಯಾಗಿ ಕಚೇರಿಗೆ ಬಂದಿಲ್ಲ, ಅವರಿಗೆ ಇರುವ ರಜೆಗಳನ್ನು ಬಳಸಿ ಕೊಂಡು ಮನೆಯಲ್ಲಿದ್ದರು.
ಆರು ತಿಂಗಳ ಹಿಂದೆ ಎ. ಆರ್.ಟಿ.ಓ ಆಗಿ ಪ್ರಮೋಷನ್ ಬಂದಿದ್ದರು ಕೂಡ ಹೇಮಂತ್ ಕುಮಾರ್ ಆಗಿನ ಸಂದರ್ಭದಲ್ಲಿ ಪ್ರಮೋಷನ್ ಪಡೆದುಕೊಳ್ಳಲಿಲ್ಲ!!. ಅದು ಒಂದು ಅನುಮಾನವನ್ನು ಮೂಡಿಸಿದೆ ಕೊನೆಯಾ 10 ದಿನದ ಮುಂದೆ ಪಡೆದಿದ್ದಾರೆ!!
ಪ್ರಮೋಷನ್ ಯಾವಾಗಾದ್ರೂ ಪಡೆಯಬಹುದು ಎನ್ನುವುದು ಕಾನೂನಲ್ಲಿ ಇದೆ ಎಂದು ಸಾರಿಗೆ ಆದಿ ದೀಕ್ಷಕರು ಶ್ರೀನಿವಾಸ್ ಗಿರಿಯವರು ದೂರವಾಣಿ ಮೂಲಕ ತಿಳಿಸಿದ್ದಾರೆ.
ಹೇಮಂತ್ ಕುಮಾರ್ ಮೇಲೆ ಈಗಾಗಲೇ ಕೆಲ ಪ್ರಕರಣಗಳ ಇದ್ದು, ಇತ್ತೀಚಿಗೆ ಹೆದ್ದಾರಿಯಲ್ಲಿ ಹಣ ವಸೂಲಿ ಮಾಡಿರುವ ವಿಡಿಯೋಗಳು ಬಹಿರಂಗವಾದ ಹಿನ್ನೆಲೆ, ಪ್ರಭಾವಿ ಮುಖಂಡರು ಆರು ಚಕ್ರದ ಲಾರಿ ಮಾಲೀಕರ ಸಂಘದ ಅಧ್ಯಕ್ಷರು ಕೆಲ RTO ಏಜೆಂಟುಗಳು ನೇರವಾಗಿ ಲೋಕಾಯುಕ್ತರಿಗೆ ದೂರನ್ನು ಸಲ್ಲಿಸಿದ್ದಾರೆ.
ಆದರೆ ಅದು ಯಾವುದೇ ಕಾರ್ಯ ರೂಪಕ್ಕೆ ಬಂದಿಲ್ಲ ಎನ್ನುವುದು ಅವರ ಮನೋಭಾವ ಆಗಿದೆ.
ಸಾಧಾರಣವಾಗಿ ಲೋಕಾಯುಕ್ತರಿಗೆ ದೂರು ನೀಡಿದರೆ ತಕ್ಷಣವೇ ಸೂಕ್ತ ಕ್ರಮ ಆಗುತ್ತದೆ ಎನ್ನುವ ಮನೋಭಾವ ಪ್ರತಿಯೊಬ್ಬರಲ್ಲಿ ಇದೆ ಆದರೆ ಹೇಮಂತ್ ಕುಮಾರ್ ಮೇಲೆ ಸಲ್ಲಿಸಿದ ದೂರು ಏನಾಗಿದೆ ಎನ್ನುವುದು ಅರ್ಥವಾಗದಂತೆ ಇದೆ.
ಕನಿಷ್ಠ ಲೋಕಾಯುಕ್ತ ಅಧಿಕಾರಿಗಳು ಇಲಾಖೆಯಲ್ಲಿ ವಿಚಾರಣೆ ಮಾಡಿದ್ದು ಆಗಲಿ,ಇಲಾಖೆಗೆ ನೋಟಿಸ್ ನೀಡಿದ್ದು, ಆಗಲಿ ಇಲ್ಲವೆಂದು ದೂರುದಾರರು ಮಾತನಾಡಿಕೊಳ್ಳುತ್ತಿದ್ದಾರೆ
ಸಾರಿ ಅಧಿಕಾರಿಗಳು ಕೂಡ ಹೇಮಂತ್ ಕುಮಾರ್ ಮೇಲೆ ದಾಖಲೆಯಾಗಿರುವ ಪ್ರಕರಣ ವಿಚಾರ ಲೋಕಾಯುಕ್ತರಿಂದ ನಮಗೆ ಯಾವುದೇ ಮಾಹಿತಿ ಇಲ್ಲವೆಂದು ಶ್ರೀನಿವಾಸ್ ಗಿರಿ ಯವರು ತಿಳಿಸಿದ್ದಾರೆ.
ಇಷ್ಟು ಆದರೂ ಕೂಡ ಹೇಮಂತ್ ಕುಮಾರ್ ಮೇಲೆ ಯಾವುದೇ ಕ್ರಮ ಆಗಿಲ್ಲ ಅನ್ನವದು,ಇದರ ಹಿನ್ನೆಲೆ ಲೋಕಾಯುಕ್ತ ಇಲಾಖೆ ಮೇಲೆ ನಂಬಿಕೆಯನ್ನು ಕಳೆದುಕೊಳ್ಳುವ ವಾತಾವರಣ ಸೃಷ್ಟಿಯಾಗಿದೆ ಎಂದು, ಇಲಾಖೆಯಲ್ಲಿ ಇನ್ನೂ ಒಂದಿಷ್ಟು ಅಧಿಕಾರಿಗಳ ಮೇಲೆ ಕೂಡ ಪ್ರಕರಣಗಳು ಆಗಿದ್ದಾವೆ.
ಅವುಗಳು ಕೂಡ ನಿಂತು ಹೋಗಿದ್ದಾವೆ ಎಂದು ಮೌಖಿಕವಾಗಿ ಮಾತಾಡು ಕೊಳ್ಳುವ ಲೋಕಾಯುಕ್ತ ಅಧಿಕಾರಿಗಳ ಮೇಲೆ ಅನುಮಾನ ಪಡುವ ಗುಸುಗುಸು ಕೇಳಿ ಬರುತ್ತದೆ.
ಈಗಲಾದರೂ ಸಾರಿಗೆ ಇಲಾಖೆಯಲ್ಲಿ ನಡೆದ ಭ್ರಷ್ಟಾಚಾರ ಲೋಕಾಯುಕ್ತದಲ್ಲಿ ದಾಖಲಾಗಿರುವ ಪ್ರಕರಣಗಳು ಇಂಥವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೇ ಎನ್ನುವುದು ಕಾದು ನೋಡಬೇಕಾಗಿದೆ.