ಬಳ್ಳಾರಿ (7)ಕರ್ನಾಟಕ ಇತಿಹಾಸದಲ್ಲಿ ವಿವಿಧ ಬೇಡಿಕೆಗಳಿಗೆ ಹೋರಾಟ ಮಾಡುವುದನ್ನು ಕಂಡಿದ್ದೇವೆ ಆದರೇ ಕಾಂಗ್ರೆಸ್ ಸರ್ಕಾರ ಆಡಳಿತ ಬಂದಮೇಲೆ ಬಳ್ಳಾರಿಯ ಮಹಾನಗರ ಪಾಲಿಕೆಯಲ್ಲಿ ವಾರ್ಡ ಗಳ ಅಭಿವೃದ್ಧಿಗೆ ಪಾಲಿಕೆ ಸದಸ್ಯರು ಗೊಂದಲ ಗದ್ದಲ ಮಾಡಿಕೊಂಡು ಬೀದಿಗಳ ಗೆ ಇಳುದು ನಮ್ಮ ವಾರ್ಡ್ ಗಳನ್ನು ಅಭಿವೃದ್ಧಿ ಮಾಡಿ ಎಂದು ಹೋರಾಟ ಮಾಡುತ್ತಿರುವುದು ಒಂದು ನಾಚಿಕೆಗೇಡು ಸಂಗತಿಯಾಗಿದೆ.
ವಾರ್ಡ್ ಗಳಗೆ ಸಕೀಯವಾಗಿ ಅನುದಾನ ಕೊಟ್ಟಿದ್ರೆ, ಇಂತಹ ಯಾವದೇ ಸಮಸ್ಯೆ ಇರಲು ಸಾಧ್ಯವಿಲ್ಲ.
ಪಾಲಿಕೆ ಯಲ್ಲಿ ಕೆಲ ಕೇವಲ ಸೀಮಿತ ಸದಸ್ಯರು ಗಳ ವಾರ್ಡ್ ಗಳು ಗೆ ಮಾತ್ರವೇ ಹಾಕಿ, ಕೆಲ ರಾಜಕಾರಣಿ ಗಳ, ಜನರು ಇಲ್ಲದೆ ಇರುವ ಬಡಾವಣೆ ಗಳ ಗೆ, ಇನ್ನು ಮುಂತಾದ ಉಪಯೋಗ ಇಲ್ಲದ ಕಾಮಗಾರಿ ಗಳ ಗೆ ಅನುದಾನ ಬಳಿಕೆ, ಮಾಡಿ ಸದಸ್ಯರ ಆಕ್ರೋಶ ಕ್ಕೆ ಪಾಲಿಕೆ ಗುರಿ ಯಾಗಿದೆ. ಪಾಲಿಕೆ ಮೇಯರ್ ಅವರಿಗೆ ಹತ್ತಿರದಲ್ಲಿರುವ ಕೆಲ ಸ್ಥಾಯಿ ಸಮಿತಿ ಸದಸ್ಯರು ಗಳು ಮತ್ತು ಕೆಲವು ರಾಜಕಾರಣಿಗಳ ಆಪ್ತರು ಅನ್ನವ ಅವರು ಮೇಯರ್ ಅವರನ್ನು ದಾರಿ ತಪ್ಪಿಸಿದ್ದಾರೆ ಅನ್ನೋದು ಮೇಲ್ನೋಟಕ್ಕೆ ಕಂಡುಬರುತ್ತದೆ,ಆದರೆ ಅನುದಾನ ವಿಚಾರದಲ್ಲಿ ತಾರತಮ್ಯ ಆಗಿದ್ದು ಅಚ್ಚರಿ ಸಂಗತಿಯಾಗಿದೆ.
ಪ್ರಸ್ತುತ ಜನಪ್ರತಿನಿಧಿಗಳು ಹೋರಾಟ ಮಾಡಬೇಕೆಂದು ನಿಂತಿರುವುದು ಇದು ಒಂದು ಪಾಲಿಕೆಗೆ ಕಪ್ಪು ಚುಕ್ಕೆ ಆದಂತಾಗಿದೆ.
ಈ ಹಿಂದೆ ಹಲವಾರು ಪಕ್ಷಗಳು ಆಡಳಿತ ಮಾಡಿದ್ದವೇ, ಬಳ್ಳಾರಿ ಮುಂಬೈ,ಬೆಂಗಳೂರು ಆಗಿದೆ!! ಮೆಟ್ರೋ ಪಾ ಲೆಟಿನ್ ಆಗಿದೆ.
ಈಗ ಜನಪ್ರತಿನಿಧಿಗಳು ಹೋರಾಟ ಮಾಡುವುದು ಅಭಿವೃದ್ಧಿ ವಿಚಾರವಾಗಿರಬಹುದು ಆದರೆ ಇವರಿಗೆ ಮಹಾನಗರ ಪಾಲಿಕೆ ಎಷ್ಟುಅಭಿವೃದ್ಧಿಯಾಗಿದೆ ಅನ್ನುವುದು ಕೂಡ ಆತ್ಮ ಪರಿಶೀಲನೆ ಮಾಡ್ಕೋಬೇಕಾಗಿದೆ.
ಇದಕ್ಕಲ್ಲ ಕಾರಣ ಆಡಳಿತ ವ್ಯವಸ್ಥೆ ಸಂಪೂರ್ಣ ಇಲ್ಲದಂತೆ ಕಾಣುತ್ತದೆ. ಅನುದಾನ ಇಲ್ಲ ಅನ್ನುವ ಪಾಲಿಕೆ, ಕೋಟಿ ಕೋಟಿ ಅನುದಾನ ಬಂದರೂ ಸಕ್ರಿಯವಾಗಿ ಅಭಿವೃದ್ಧಿ ಮಾಡುತ್ತಿಲ್ಲವೆಂದು ಆಡಳಿತ ಮತ್ತು ವಿರೋಧ ಪಕ್ಷದ ಪಾಲಿಕೆ ಸದಸ್ಯ ಆರೋಪ ಮಾಡುತ್ತಿದ್ದು ಹಲವಾರು ಅನುಮಾನಗಳನ್ನು ಮೂಡಿಸಿದೆ.
ಇದರ ಮಧ್ಯದಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲವೂ ದರಗಳನ್ನು ದುಬಾರಿ ಮಾಡಿ ಜನರ ಮೇಲೆ ಭಾರ ಹಾಕುತ್ತಿರುವುದು ವಿಪರ್ಯಾಸವೆಂದು ತಿಳಿದು ಬರುತ್ತದೆ.
ಆದರೆ ಸದಸ್ಯರು ತಮ್ಮ ವಾರ್ಡಗಳಿಗೆ ಅನುದಾನ ಬಂದಿಲ್ಲವೆಂದು ಹೋರಾಟ ಮಾಡುವವರು ಇವರಿಗೆ ಪಾಲಿಕೆಯಲ್ಲಿ ಬಂದ ಅನುದಾನವನ್ನು ಯಾವ ಮಟ್ಟದಲ್ಲಿ ಬಳಕೆ ಮಾಡಿದ್ದಾರೆ ಎಲ್ಲಿ ಲೋಪ ದೋಷ ಆಗಿದೆ ಅನ್ನುವುದು ಬಹಿರಂಗ ಪಡಿಸಬೇಕಾಗಿದೆ, ಕಾನೂನಿನ ಹೋರಾಟ ಮಾಡಬೇಕು ಆಗಿದೆ. ಇಲ್ಲ ದಿದ್ದರೆ ಲಾಭಕ್ಕೆ ಮಾಡುವ ಹೋರಾಟ ಅನ್ನುವ ಅಪವಾದ ಬರಬಾರದು.
ಈಗ ಜನಪ್ರತಿನಿಧಿಗಳು ಹೋರಾಟ ಆಗಿದೆ ಇನ್ನು ಮುಂದೆ ಸಾರ್ವಜನಿಕರು ಇದೇ ಹಾದಿಯಲ್ಲಿ ಬೀದಿಗಿಳಿದು ಹೋರಾಟ ಮಾಡುವ ದಿನಮಾನಗಳು ಹತ್ತಿರದಲ್ಲಿ ಇದ್ದಾವೆ.

ಈಗಾಗಲೇ ವಾರ್ಡಗಳಲ್ಲಿ ಎಲ್ಲವೂ ಕುಂಠಿತವಾಗಿದ್ದು ಜನರು ಆಕ್ರೋಶ ದಲ್ಲಿ ಇದ್ದಾರೆ. ಇದು ಒಂದು ರೇತಿಯಲ್ಲಿ ಶಾಸಕರುಗೆ ಕೂಡ, ಕೆಟ್ಟ ಹೆಸರು ಆಗುತ್ತೆ. ಜನರು ರಸ್ತೆ ಮೇಲೆ ನಿಂತು ಏನು ಮಾಡಿಗಿ ಅನ್ನವು ಪ್ರಶ್ನೆ ಮಾಡುವ ಮೊದಲು ಜನರಿಗೆ ಸೌಲಭ್ಯ ಗಳು ಮಾಡಬೇಕು, ಪಾಲಿಕೆ ಯನ್ನು ಉತ್ತಮ ದಾರಿಯಲ್ಲಿ ತರಬೇಕು. ಅನ್ನವದು ಜನರ ಅಭಿಪ್ರಾಯ ವಾಗಿದೆ.
[video width="720" height="576" mp4="https://news9today.in/wp-content/uploads/2025/03/VN20250307_080112.mp4"][/video]