ರಾಮುಲು ಗೆಲುವು ಕಚ್ಚಿತ ಇತ್ತು.ದಾರಿತಪ್ಪಿದ್ದು ಏಲ್ಲಿ.?? ಗಾಲಿ ಜನಾರ್ದನ ರೆಡ್ಡಿ ಬಿಜೆಪಿ ಗೆ ಸೇರ್ಪಡೆ ಗೊಂಡ ಮೇಲೆ ರಾಜಕೀಯ ಚಿತ್ರಣ ಬದಲಾವಣೆ ಆಗಿತ್ತು.ರಾಮುಲು ಬಣ ರೆಡ್ಡಿ ಪಡೆಯನ್ನು ಕಡೆಗಣಿಸಿ ಚುನಾವಣೆ!! ಬಳ್ಳಾರಿ (6) ರಾಜ್ಯ ರಾಜಕಾರಣ ದಲ್ಲಿ ಬಿಜೆಪಿ ಪಕ್ಷದಲ್ಲಿ ಗಾಲಿ ಜನಾರ್ದನ ರೆಡ್ಡಿ ಅವರು ಬಹು ದೊಡ್ಡ ನಾಯಕರು ಆಗಿ ಬೆಳೆದು ನಿಂತಿರುವ ನಾಯಕರು, ದೆಹಲಿ ಮಟ್ಟದಲ್ಲಿ ಕೂಡ ಪ್ರಧಾನಿಗಳು ಗಾಲಿ ಜನಾರ್ದನ ರೆಡ್ಡಿ ಗೋಸ್ಕರ ಕಾಯುವಂತಹ ವಾತಾವರಣ ಸೃಷ್ಟಿ ಮಾಡಿದ್ದರು (ರಾಜಕೀಯ ವಿಚಾರದಲ್ಲಿ). ತದನಂತರ ಕಾಲಕ್ರಮೇಣ ಅವರು ಬಿಜೆಪಿ ದಿಂದ ದೂರ ಇರುವ ವಾತಾವರಣ ಸೃಷ್ಟಿ ಆಗಿತ್ತು.
ಆದರೆ ಕಾಲ ಕ್ರಮೇಣವಾಗಿ ಅವರು ಪಕ್ಷವನ್ನು ಕಟ್ಟಿದ್ದರು, ಮೊನ್ನೆ ನಡೆದ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬಿಜೆಪಿ ಗೆ ನಿದ್ದೆ ಹಾಳು ಮಾಡಿದ್ದರು.
ಎರಡು ತಿಂಗಳಲ್ಲಿ ಪಕ್ಷವನ್ನು ಕಟ್ಟಿ ಕಣಕ್ಕೆ ಗಾಲಿ ಲಕ್ಷ್ಮಿ ಅರುಣಾ ಅವರನ್ನು ನಿಲ್ಲಿಸಲಾಗಿತ್ತು.
ಬಳ್ಳಾರಿ ಯಲ್ಲಿ ಕೂಡ ಗೆಲುವು ಅಂತರದಲ್ಲಿ ಸೋಲಿದರು, ಬಹುದೊಡ್ಡ ಪಕ್ಷಗಳಿಗೆ ಚಳಿ ಜ್ವರ ಬಂದಿತ್ತು.
ತದನಂತ ಲೋಕ ಸಭಾ ಚುನಾವಣೆ ಗೆ “ರೆಡ್ಡಿ ಗಾರು” ಬಿಜೆಪಿ ಸೇರ್ಪಡೆ ಆಗಿದ್ದರು,ಅದರೆ ರಾಮುಲು ಅವರು ಹಳೆ ರಾಜಕೀಯ ವನ್ನು ಮಾಡುತ್ತ ಬಂದರು, ಈಗಾಗಲೇ ರಾಮುಲು ರಾಜಕೀಯ ಜನರಲ್ಲಿ ಮೆಚ್ಚುಗೆ ಇಲ್ಲ ಅವರು ಯಾರಿಗೆ ಸಿಗಲ್ಲ,ಕೆಲಸಗಳು ಮಾಡಲ್ಲ,ಸೀಮಿತ ಅವರ ಬಳಿ ಇರುವ ನಾಯಕರಿಗೆ ಮಾತ್ರವೇ ಗೌರವ, ಮತ್ತು ಕೇಲ ಹಳ್ಳಿ ಗಳಲ್ಲಿ ಜಾತಿ ರಾಜಕೀಯ ಮಾಡುತ್ತ ಕೆಟ್ಟ ಪರಿಣಾಮ ಗಳನ್ನು ಸೃಷ್ಟಿ ಮಾಡುತ್ತಾರೆ ಎನ್ನುವ ಅಪವಾದ ಇತ್ತು.
ಇನ್ನು ಉಳಿದ ಸಮುದಾಯ ಗಳನ್ನು ವಿರೋದ ಮಾಡಿಕೊಂಡಿದ್ದರು.
ದೇಶದಲ್ಲಿ ಮೋದಿ ಅಲೆ ಇದೆ ಅನ್ನುವ ಎಚ್ಚಿನ ನಂಬಿಕೆ ಇತ್ತು,ಇದರಲ್ಲಿ ಮೊನ್ನೆ ನಡೆದ ವಿಧಾನ ಸಭಾ ಚುನಾವಣೆಯಲ್ಲಿ, ರಾಮುಲು ಆಪ್ತ ಜನಾರ್ದನ ರೆಡ್ಡಿ ಗೆ,ಅಗಲಿ ಬಿಜೆಪಿ ಪಕ್ಷದ ಸೋಮಶೇಖರ್ ರೆಡ್ಡಿ ಗೆ ಅಗಲಿ ನಿಂತು ಸಹಾಯ ಸಹಕಾರ ಮಾಡಿಲ್ಲ ಎನ್ನುವುದು, ಕೇಳಿ ಬಂತು, ಆದರೇ ಬಿಜೆಪಿ ಗೆ ಸೇರ್ಪಡೆ ಆಗಿದ್ದ ಗಾಲಿ ಲಕ್ಷ್ಮಿ ಅರುಣಾ,ರಾಮುಲು ಅವರ ಚುನಾವಣೆಯಲ್ಲಿ ಝಾನ್ಸಿ ಭಾಯಿ ದಂತೆ ಹೋರಾಟ ಮಾಡಿದರು, ಇವರನ್ನು ವಿರೋಧಿ ಮಾಡಿಕೊಂಡು ರಾಜಕೀಯ ಲಾಭವನ್ನು ಪಡೆಯಬಹುದು ಎಂದು ಆಲೋಚನೆ ಮಾಡಿದ್ದ ಅವರು ಸೋಲು ಗೆ ಗುರಿ ಆಗಿದ್ದಾರೆ.
ತದನಂತರ ಅವರು ಮತ್ತೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೇರ್ಪಡೆ, ಆಗಿದ್ದರು. ತದನಂತರ ಬಳ್ಳಾರಿ ಜಿಲ್ಲೆ ಯಲ್ಲಿ ಗಾಲಿ ಲಕ್ಷ್ಮೀ ಅರುಣಾ ಬಿಡುವು ಇಲ್ಲದೆ,ಲೋಕಸಭಾ ಚುನಾವಣೆಯಲ್ಲಿ ಪ್ರಚಾರ ಮಾಡಿದ್ದರು. ಆದರೆ ಬಿಜೆಪಿ ಒಂದಿಷ್ಟು ನಾಯಕರು, ರೆಡ್ಡಿ ಗಾರು ಬಣವನ್ನು ಸಕ್ರಿಯವಾಗಿ ಬಳಸಿಕೊಳ್ಳಲು ಪ್ರಯತ್ನ ಮಾಡಲಿಲ್ಲ, ತಾತ್ಕಾಲಿಕವಾಗಿ ನೋಡಿ ಕೊಂಡಿದ್ದರು,ಗಾಲಿ ಬಿಜೆಪಿಗೆ ಸೇರ್ಪಡೆ ಗೊಂಡ ತದನಂತರ ಬಳ್ಳಾರಿಯಲ್ಲಿ ವಾತಾವರಣ ಬದಲಾವಣೆ ಆಗಿತ್ತು, ಕೊನೆಯ ಹಂತದಲ್ಲಿಬಿಜೆಪಿ ಅವರು ಸರಿಯಾಗಿ ನಡೆದು ಕೊಳ್ಳಲಿಲ್ಲ ಅನ್ನುವ ಆರೋಪ ಇದೆ.
ಇದರ ಮದ್ಯದಲ್ಲಿ ರಾಮುಲು ಪಕ್ಕದಲ್ಲಿ ಇದ್ದ ಪ್ರಭಾವಿ ನಾಯಕರು ಒಬ್ಬರು, ಅಡಳಿತ ಪಕ್ಷದ ನಾಯಕರು ಅವರ ಜೊತೆಯಲ್ಲಿ ರಾಮುಲು ಅವರು ಸೋಲಿಗೆ ಪ್ಲಾನ್ ಮಾಡಿದ್ದರು ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತದೆ.
ಈಬಾರಿ ಗೆಲ್ಲುವ ವಾತಾವರಣ ದಲ್ಲಿ ಇದ್ದ ಶ್ರೀ ರಾಮುಲು ಗೆ ಕರ್ಣ ನಂತೆ ಎಲ್ಲಾ ಶಾಪಗಳು,ಮುಗಿಲು ಮುಟ್ಟಿದ್ದವು.
ರಾಮುಲು ಬಳಿ ನಾಯಕರಲ್ಲಿ ಆಪ್ತ ರಲ್ಲಿ, ಕೆಲವರ ಮಾತ್ರವೇ ಜನರ ಮದ್ಯದಲ್ಲಿ ಇರುತ್ತಾರೆ ಸಮಸ್ಯೆ ಗಳು ಬಂದರೆ,ಸಹಾಯ ಸಹಕಾರ ಮಾಡುವ ಅವರು ಇದ್ದಾರೆ.
ಪ್ರಸ್ತುತ ಬಳ್ಳಾರಿ ಬಿಜೆಪಿ ಯಲ್ಲಿ ಜನರ ಬೆನ್ನು ಗೆ ನಿಂತು ಸಾಧ್ಯವಾದಷ್ಟು, ನ್ಯಾಯ ಮಾಡುವ ಅದರಲ್ಲಿ ಸಣ್ಣ ಪಕ್ಕಿರಪ್ಪ ಅವರು, ಸುರೇಶ್ ಬಾಬು, ಪಾಲಣ್ಣ,ಶ್ರೀನಿವಾಸ್ ಮೊತ್ಕರ್,ಕಪ್ಪು ಗಲ್ಲ್ ರಸ್ತೆಯ ಪಾಲಿಕೆ ಸದಸ್ಯ ಹನುಮಂತ, ಗೋವಿಂದರಾಜು, ವೀರಶೇಕರ ರೆಡ್ಡಿ, ಒಂದಿಷ್ಟು ಆಪ್ತರು. ಇನ್ನೂ ಉಳಿದ ನಾಯಕರು ನೋಡಿದ ಕೂಡಲೇ ಅಸಹ್ಯ ಮಾಡಿಕೊಳ್ಳುವ ಪುಣ್ಯ ಪುರುಷರು ಇದ್ದಾರೆ. ಗಾಲಿ ಲಕ್ಷ್ಮಿ ಅರುಣಾ ಜನಪ್ರೀತಿ ಮೊನ್ನೆ ನಡೆದ ಚುನಾವಣೆ ಸಾಕ್ಷ್ಯವು, ಅಂದರೆ ಅಲ್ಲಿ ಎಲ್ಲಾರು ಜನರ ಮದ್ಯದಲ್ಲಿ ಇದ್ದಾರೆ ಎಂದು ಆರ್ಥ ಮಾಡಿಕೊಳ್ಳಬಹುದು. ಮುಂದೆ ತಾಲುಕು ಜಿಲ್ಲಾಪಂಚಾಯಿತಿ,ಚುನಾವಣೆ ಗಳು ಇದ್ದಾವೆ, ಅದರಲ್ಲಿ ರಾಮುಲು ಅವರು ಸಕ್ರಿಯ ವಾಗಿ ಇದ್ದು ತಳಮಟ್ಟದ ದಿಂದ ಶಕ್ತಿ ತೂಂಭ ಬೇಕು ಅಗಿದೆ.(ಕೆ.ಬಜಾರಪ್ಪ ವರದಿಗಾರರು, ಕಲ್ಯಾಣ ಕರ್ನಾಟಕ.)