*ಆಟೋ ಕಾಲವೆಗೆ ಉರುಳಿ ಮೂರು ಮಂದಿ ಮೃತಿ,ಇನ್ನು ಉಳಿದ ಅವರು ಸಿಕ್ಕಿಲ್ಲ.!!* ಬಳ್ಳಾರಿ(14) ತಾಲ್ಲೂಕಿನ ಕೊಳ ಗಲ್ಲು ಗ್ರಾಮದ ದಿಂದ ಬೆಳಿಗ್ಗೆ 8.30 ಸಮಯದಲ್ಲಿ,ಅದೇ ಗ್ರಾಮದ ಆಟೋ ದಲ್ಲಿ ಕೂಲಿ ಕೆಲಸಕ್ಕೆ,9 ಜನರನ್ನು ತುಂಬಿಸಿ ಕೊಂಡು ಕರಡಿ ಗುಡ್ಡದ ಕಡೆ ಹೋಗುವ ದಾರಿಯಲ್ಲಿ ಇರುವ ತುಂಗಭದ್ರಾ ಕಾಲುವೆ ಗೆ ಆಟೋ ಉರುಳಿ ಬಿದ್ದಿದೆ.
ಮೂರು ಮಂದಿ ಮಹಿಳೆಯರು ಸ್ಥಳದಲ್ಲಿ ಮೃತ ಪಟ್ಟಿದ್ದಾರೆ,ಇನ್ನೂ ಮೂರು ಮಂದಿಯನ್ನು ಅಲ್ಲಿಯ ಜನರು ರಕ್ಷಣೆ ಮಾಡಿದ್ದಾರೆ.
ಇನ್ನೂ ಉಳಿದ ಮೂರು ಮಂದಿ ಕಾಲುವೆ ದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.
ಅವರನ್ನು ಜಿಲ್ಲಾ ಅಡಳಿತ ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದೆ.
ಸ್ಥಳಕ್ಕೆ ಕಾಂಗ್ರೆಸ್ನ ಗ್ರಾಮೀಣ ಶಾಸಕರು ಅಗಿರವ ನಾಗೇಂದ್ರ ಅವರು ಆಪ್ತರು ತೆರಳಿ ರಕ್ಷಣ ಕಾರ್ಯದಲ್ಲಿ ತೊಡಗಿದ್ದಾರೆ.
ಮೃತ ದೇಹಗಳನ್ನು ವಿಮ್ಸ್ ಆಸ್ಪತ್ರೆ ಗೆ ಕಳಸಲಾಗಿದೆ. ತುಂಗಭದ್ರಾ ಭದ್ರ ಕಾಲುವೆ ಗ್ರಾಮೀಣ ಮತ್ತು ನಗರ ಪ್ರದೇಶ ಗಳಲ್ಲಿ ಹರಿಯುತ್ತದೆ,ಬ್ರಿಡ್ಜ್ ಹಕ್ಕ ಪಕ್ಕದಲ್ಲಿ, ಯಾವುದೇ ರಕ್ಷಣೆ ವ್ಯವಸ್ಥೆ ಇಲ್ಲದಂತೆ ಅಗಿದೆ.
ತಡೆಗೋಡೆ ಗಳು ನಿರ್ಮಾಣ, ಸ್ಪೀಡ್ ಬ್ರೇಕರ್ ಗಳು, ಯಾವುದೇ ಇಲ್ಲದಂತೆ ನಿರ್ಮಾಣ ಮಾಡಿದ್ದಾರೆ,ಅಪಾಯ ಕ್ಕೆ ತುಂಗಭದ್ರಾ ಬೋರ್ಡ್ ಅಧಿಕಾರಿಗಳ ಹೊಣೆ ಅಗಿದೆ.
ಪ್ರತಿ ವರ್ಷ ಕೋಟಿ ಕೋಟಿ ಅನುದಾನ ಬಂದರು, ಇಂತಹ ಸುರಕ್ಷಿತ ವ್ಯವಸ್ಥೆ ಮಾಡದೇ ಕಳಪೆ ಕಾಮಗಾರಿ ಗಳ ಗೆ ಮಾಡಲು ಅನುಮತಿ ಕೊಟ್ಟು ಲೂಟಿ ಮಾಡುತ್ತ ಇದ್ದಾರೆ ಬೋರ್ಡ್ ಅಧಿಕಾರಿಗಳು.
ಬ್ರಿಡ್ಜ್ ದಿಂದ ಸ್ವಲ್ಪ ದೂರದಲ್ಲಿ ಹೊಗಿರವ ಆಟೋ ಕಾಲುವೆ ಗೆ ಉರುಳಿ ದೆ.ಸಾಧಾರಣವಾಗಿ ಹಳ್ಳಿ ಗಳಲ್ಲಿ ಕೂಲಿ ಕಾರ್ಮಿಕರು ಆಟೋ ಗಳಲ್ಲಿ ಹೋಗಿ ಕೆಲಸಮಾಡಿ ಮತ್ತೆ ಆಟೋ ಗಳಲ್ಲಿ ವಾಪಸು ಬರುತ್ತಾರೆ.
ಇನ್ನೂ ಕೇಲ ಆಟೋ ಗಳು ಕ್ಯಾಪಸಿಟಿಗೆ ಮೀರಿ ಕಾರ್ಮಿಕರನ್ನು ಹಾಕುತ್ತಾರೆ,ಇದರಿಂದ ಕೂಡ ತುಂಬಾ ಅಪಾಯ ಗಳು ಸಂಭವಿಸಿದ ಘಟನೆಗಳು ಇದ್ದಾವೆ.(ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)