ಪಡಿತರ ಅಕ್ಕಿ ಎಂದು ಜೋಳ ವಾಹನವನ್ನು ಠಾಣೆಗೆ ತಂದ ಪೊಲೀಸರು!!. ಬೇಸರಗೊಂಡ ಮಾಲೀಕರು.
ಬಳ್ಳಾರಿ(11) ಜಿಲ್ಲೆಯಲ್ಲಿ ಕೆಲ ಠಾಣೆಗಳು ಪಬ್ಲಿಕ್ ಗೆ ವಿನಾಕಾರಣ ತೊಂದೆರೆ ಕೊಡುತ್ತಾ ಇದ್ದಾರೆ. ಈಗಾಗಲೇ ಠಾಣೆಗಳು ಪಂಚಾಯತಿ ಕಟ್ಟೆಗಳು ಆಗಿದ್ದಾವೆ. ಮಧ್ಯವರ್ತಿಗಳ ಹಾವಳಿ ಜಾತಿ ಲೆಕ್ಕ ಚಾರದಲ್ಲಿ ಠಾಣೆ ಅಧಿಕಾರಿಗಳ ವರ್ತನೆ ಇದೇ ಅನ್ನುವ ಆರೋಪ ಲಂಚ ಬೇಡಿಕೆ ವಿನಾಕಾರಣ ವಿಚಾರಣೆ ತಾಸು ಘಟ್ಟಲೆ ಠಾಣೆಗಳ ಮುಂದೆ ದೂರುದಾರರು ಕಾದುಕೊಂಡು ಇರೋದು. ಸುಳ್ಳು ಪ್ರಕರಣಗಳು ಆಗುತ್ತಾ ನೇ ಇದ್ದಾವೆ. ಇದರ ಮದ್ಯದಲ್ಲಿ ಅಕ್ರಮ ದಂದೆಗಳು ಕ್ರೈಂ ರೇಟ್ ಬೆಳದು ನಿಂತಿದೆ ದಿನ ನಿತ್ಯ ಆಗುತ್ತಿರುವ ಘಟನೆಗಳು ಕಣ್ಣು ಮುಂದೆ ಕಾಣುತ್ತ ಇದ್ದಾವೆ.
ಇದರ ಮದ್ಯದಲ್ಲಿ ಪಡಿತರ ಅಕ್ಕಿ ಕಾಳ ಸಂತೆದಂದೆ ಗ್ರಾವೆಲ್ ದಂದೆ, ನಿಲ್ಲೋದು ಸಾಧ್ಯವಿಲ್ಲ. ಪೊಲೀಸ್ ಇಲಾಖೆ ಒಂದೇ ಅಲ್ಲ ಸಂಬಂದಿತ ಎಲ್ಲಾ ಇಲಾಖೆ ಗಳು ವಿಫಲವಾಗಿದ್ದವೇ.
•ಪಡಿತರ ಅಕ್ರಮ ಅಕ್ಕಿ ಎಂದು ಗ್ರಾಮೀಣ ಠಾಣೆಯ ಅಧಿಕಾರಿಗಳು ಕಳೆದ ಬುಧವಾರ ಆಟೋ ಒಂದು ರಲ್ಲಿ ಪಡಿತರ ಅಕ್ಕಿ ಕಾಳ ಸಂತೆಗೆ ಹೋಗುತ್ತಾ ಇದ್ದಾವೆ ಅನ್ನುವ ಮಾಹಿತಿ ಹಿನ್ನಲೆ ಒಂದು ಆಟೋ ಹಿಡಿಯುತ್ತಾರೆ ಆದರೇ ಹಿಂದೆಯೇ ಮತ್ತೊಂದು ದಾವಣಗೆರೆ ಮೂಲದ ಆಟೋ ಒಂದು ಬಳ್ಳಾರಿ ಕೃಷಿ ಮಾರುಕಟ್ಟೆದಿಂದ ಬಿಲ್ ಪಡೆದು ನಟರಾಜ್ & ಕೋ,ಅವರ ಅಂಗಡಿ ಬಿಲ್ ಮೂಲಕ ಸರಿಯಾದ ದಾಖಲೆ ಮೂಲಕ ಜೋಳವನ್ನು ದಾವಣಗೆರೆಗೆ ಪುಷ್ಪವತಿ ಅನ್ನುವ ಅವರೆಗೆ ತಗದುಕೊಂಡು ಹೋಗುತಾ ಇತ್ತು ಅಷ್ಟೇ ಹಿಂದೆ ಮುಂದೆ ನೋಡದೆ ಠಾಣೆಗೆ ತಂದು ಇಟ್ಟು ಕೂತುಕೊಂಡರು. ಜೋಳ ಸರಬರಾಜು ಮಾಡುತ್ತಿರುವ ಮಾಲೀಕರು ಗಾಬರಿಯಾಗಿ ಏನು ಬಂತಪ್ಪ ಕಾಲ ತಿನ್ನುವ ಜೋಳ ದಾಖಲೆ ಎಲ್ಲಾ ಸರಿಯಾಗಿ ಇದ್ದು ಪೊಲೀಸ್ ರು ಹಿಡಿಕೊಳ್ಳೋದು ಏನು ಎಂದು ಓಡಿ ಬಂದ್ರು ಏನು ಪ್ರಾಬ್ಲಮ್ ಸರ್ ಎಂದು ಕೇಳಿದರು ಪೊಲೀಸ್ ರು ಹೇಳಿದ್ದು ಮೇಲಿನ ಅಧಿಕಾರಿಗಳು ಆದೇಶ ಇದು ಪಡಿತರ ಜೋಳ ಅಂದರು ಅಯ್ಯೋ ಶಿವನೇ ನಾವು ಅಂತಾ ಕೆಲಸ ಮಾಡಲ್ಲ ನಮ್ಮ ಅಂಗಡಿಗೆ ಒಳ್ಳೆಯ ಹೆಸರು ಇದೇ ನಾವು ಟೆಂಡರ್ ನಲ್ಲಿ ಖರೀದಿ ಮಾಡುತ್ತಿವಿ ದಯವಿಟ್ಟು ತಮಗೆ ರಾಂಗ್ ಮೆಸೇಜ್ ಆಗಿದೆ ಗಾಡಿ ಬಿಡಿ ಎಂದು ಗಂಟೆ ಗಟ್ಟಲೆ ಕಾದು ಬಿಟ್ಟರು ಸಾಯಂಕಾಲ ಕೊನೆಗೆ ಆಹಾರ ಸರಬರಾಜು ಇಲಾಖೆ ಅಧಿಕಾರಿಗಳನ್ನು ಕರೆಸಿ ಚೆಕ್ ಮಾಡದ ಮೇಲೆ ವಾಹನವನ್ನು ಬಿಟ್ಟರು. ಅಂದರೇ ಪೊಲೀಸ್ ರು ಅಂದುಕೊಂಡರೇ ಏನಾದರು ಮಾಡಬಹುದಾ..?? ಹಿರಿಯ ಅಧಿಕಾರಿಗಳು ಇದ್ದು ಈ ರೀತಿ ಮಾಡಿದರೆ ಸಾರ್ವಜನಿಕ ವಲಯದಲ್ಲಿ ಏನು ಸಂದೇಶ ಹೋಗುತ್ತೆ ಡಿಪಾರ್ಟ್ಮೆಂಟ್ ಕುರಿತು ಈಗಾಗಲೇ ಇದೇ ಠಾಣೆನಲ್ಲಿ ಮತ್ತೊಂದು ಅಧಿಕಾರಿ ಲಂಚ ಬೇಡಿಕೆ ಇಟ್ಟಿದ್ದ ಸುದ್ದಿ ಕೂಡ ಆಗಿತ್ತು ಆದರೇ ಶರವೇಗದ ಅಧಿಕಾರಿಗಳು ದಿಟ್ಟ ಅಧಿಕಾರಿಗಳು ಎಂದು ಜಿಲ್ಲೆಯೇ ಜನತೆ ಮನಸುನಲ್ಲಿ ಇತ್ತು ಆದರೇ ಇತ್ತೀಚೆಗೆ ವೇಗ 0 ಆಗಿದೆ ಅನ್ನುತ್ತಾರೆ ಇಲಾಖೆನಲ್ಲಿ ಯಾವದೇ ಕ್ರಮ ಆಗುತ್ತಾ ಇಲ್ಲ ಅನ್ನುವ ಸಂದೇಶ ಕೂಡ ಶರವೇಗದಲ್ಲಿ ಸಾರ್ವಜನಿಕ ಮಾತನಾಡಿಕೊಳ್ಳತ್ತಿದ್ದಾರೆ ಏನೋ ಒತ್ತಡ ಆಗಿರಬೇಕು ಅನ್ನುವ ಸಂದೇಶ ಹೊರ ಬಂದಿದೆ.IGP ಸಾಹೇಬ್ರು ಮಾತ್ರ ಅದೇ ಸ್ಪೀಡ್ ನಲ್ಲಿ ಇದ್ದಾರೆ ಅನ್ನುತ್ತಾರೆ. ಸೂಕ್ತ ಆಡಳಿತ ಇಲ್ಲ ಅಂದ್ರೆ ಜನರ ಪಾಡು ಏನು..??














