ಮೇಯರ್ ಆಗಲು ₹1.10 ಕೋಟಿ ಅಗತ್ಯವೆಂದು ಹೇಳಿ ಹಣ ಪಡೆದ ಆರೋಪ; ಹಣ ವಾಪಸ್ ಕೇಳಿದವರಿಗೆ ಜೀವ ಬೆದರಿಕೆ ಆರೋಪ
ಬಳ್ಳಾರಿ, ಜು.18: ಬಳ್ಳಾರಿ ಮಹಾನಗರ ಪಾಲಿಕೆಯ ಸದಸ್ಯ ಮೊಹಮ್ಮದ್ ಆಸೀಫ್ ಭಾಷಾ ವಿರುದ್ಧ ₹1.10 ಕೋಟಿ ಹಣ ಪಡೆದು, ಬಳಿಕ ಹಣವನ್ನು ವಾಪಸ್ ಕೇಳಿದ ವ್ಯಕ್ತಿಗೆ ಜೀವ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ.
ದೂರಿನ ಪ್ರಕಾರ, ಎಸ್.ಎಂ. ಕಿಶೋರ್ (ದಿವಂಗತ ಎಸ್.ಕೆ. ಮುಕುಂದರಾವ್ ಅವರ ಪುತ್ರ) ಅವರಿಂದ ಮೊಹಮ್ಮದ್ ಆಸೀಫ್ ಭಾಷಾ ಅವರು “ನಾನು ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಆಗಬೇಕಾಗಿದೆ. ಮೇಯರ್ ಆಗಲು ₹1.10 ಕೋಟಿ ಖರ್ಚಾಗುತ್ತದೆ” ಎಂದು ತಿಳಿಸಿ, ಒಟ್ಟು ₹1.10 ಕೋಟಿ ಹಣವನ್ನು ಪಡೆದಿರುವುದಾಗಿ ಆರೋಪಿಸಲಾಗಿದೆ.
ನಂತರ ಕಿಶೋರ್ ಅವರು ತಾವು ನೀಡಿದ್ದ ಹಣವನ್ನು ವಾಪಸ್ ನೀಡುವಂತೆ ಕೇಳಿದಾಗ, ಮೊಹಮ್ಮದ್ ಆಸೀಫ್ ಭಾಷಾ ಅವರು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಸಂಬಂಧ ಬಳ್ಳಾರಿಯ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಸೂಚನೆ: ಈ ಸುದ್ದಿಯಲ್ಲಿರುವ ಆರೋಪಗಳು














